ಭೂ ಕುಸಿತದಿಂದಾಗಿ ರಸ್ತೆ ಸಂಪರ್ಕ ಕಡಿದಿದ್ದು, ಸೇನೆಯ ರಕ್ಷಣಾ ಸಿಬ್ಬಂದಿ ಇಡೀ ರಾತ್ರಿ ಮಣ್ಣು ತೆರವುಗೊಳಿಸುವಲ್ಲಿ ತೊಡಗಿದ್ದರು. ನಗರಕ್ಕೆ ಸಂಪರ್ಕ ಕಲ್ಪಿಸಲು ಶ್ರಮಿಸುತ್ತಿದ್ದಾರೆ. ಭಾರೀ ಮಣ್ಣು ಬಿದ್ದಿರುವುದು ಮತ್ತು ಮಳೆ ಬರುತ್ತಿರುವುದು ತೆರವು ಕಾರ್ಯಕ್ಕೆ ಅಡ್ಡಿಯಾಗಿದೆ ಎಂದು ವಕ್ತಾರರು ಹೇಳಿದ್ದಾರೆ.