ರಾಮನಗರ ಗ್ರಾಮೀಣ ಠಾಣೆಯ ಹಿಂಭಾಗ ಖಾಲಿ ಜಾಗದಲ್ಲಿ ಆಂಬುಲೆನ್ಸ್ ಹಾಗೆಯೇ ನಿಂತಿದೆ. ವಾಹನವನ್ನು ಒಂದು ತಿಂಗಳಿನಿಂದ ಮುಟ್ಟದ ಕಾರಣ ದೂಳು ಹಿಡಿಯುತ್ತಿದೆ. ವಾಹನದ ನಿರ್ವಹಣೆ ಮತ್ತು ತುರ್ತು ಸೇವೆಗಾಗಿ ಸರ್ಕಾರವು ಏಜೆನ್ಸಿ ಮೂಲಕ ತಲಾ ಇಬ್ಬರು ವಾಹನ ಚಾಲಕರು, ನರ್ಸ್ಗಳನ್ನು ನೇಮಿಸಿಕೊಂಡಿದ್ದು, ಈಗ ಅವರಿಗೆ ಕೆಲಸವಿಲ್ಲದಂತೆ ಆಗಿದೆ.