ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಾರಣೆ ನೆಪದಲ್ಲಿ ತೊಂದರೆ: ದೇವರಾಜ್

Last Updated 7 ಅಕ್ಟೋಬರ್ 2017, 19:31 IST
ಅಕ್ಷರ ಗಾತ್ರ

ಬೆಂಗಳೂರು: ಸಿಸಿಬಿ ಜಂಟಿ ಕಮಿಷನರ್ ಸತೀಶ್ ಕುಮಾರ್ ಅವರನ್ನು ಶನಿವಾರ ಭೇಟಿಯಾದ ನಟ ದೇವರಾಜ್, ‘ವಿಚಾರಣೆ ನೆಪದಲ್ಲಿ ಪೊಲೀಸರು ನನ್ನ ಕಿರಿಯ ಮಗನಿಗೆ ತೊಂದರೆ ಕೊಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ನಗರ ಪೊಲೀಸ್ ಕಮಿಷನರ್ ಟಿ.ಸುನಿಲ್‌ಕುಮಾರ್ ಅವರನ್ನು ಭೇಟಿಯಾಗುವ ಉದ್ದೇಶದಿಂದ ಮಧ್ಯಾಹ್ನ ಕಮಿನಷನರ್ ಕಚೇರಿಗೆ ಬಂದಿದ್ದ ದೇವರಾಜ್, ಅವರು ಸಿಗದ ಕಾರಣಕ್ಕೆ ಸತೀಶ್ ಅವರನ್ನು ಭೇಟಿಯಾದರು.

‘ಗೀತಾವಿಷ್ಣು ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಮಗ ಪ್ರಣವ್‌ನನ್ನು ಪೊಲೀಸರು ಪದೇ ಪದೇ ವಿಚಾರಣೆಗೆ ಕರೆಯುತ್ತಿದ್ದಾರೆ. ಆ ದಿನ ಗೀತಾವಿಷ್ಣುವಿನ ಕಾರಿನಲ್ಲಿ ಪ್ರಣವ್ ಇರಲಿಲ್ಲ. ಗೆಳೆಯನಿಗೆ ಅಪಘಾತವಾದ ವಿಚಾರ ತಿಳಿದು ಸ್ಥಳಕ್ಕೆ ಹೋಗಿದ್ದ ಅಷ್ಟೆ. ಈ ಸಂಗತಿ ಪೊಲೀಸರಿಗೂ ಗೊತ್ತಾಗಿದೆ. ಆದರೂ ಏಕೆ ವಿಚಾರಣೆ ಮಾಡುತ್ತಿದ್ದಾರೆ ತಿಳಿಯುತ್ತಿಲ್ಲ’ ಎಂದು ಸತೀಶ್ ಬಳಿ ಅಳಲು ತೋಡಿಕೊಂಡಿದ್ದಾರೆ.

‘ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಎಲ್ಲರನ್ನೂ ವಿಚಾರಣೆ ಮಾಡುತ್ತಿದ್ದೇವೆ. ಅಂತೆಯೇ ಪ್ರಕರಣದ ಮಾಹಿತಿ ಪಡೆಯಲು ಪ್ರಣವ್ ಅವರನ್ನೂ ಕರೆದಿದ್ದೇವೆ. ಅವರು ಆರೋಪಿಯಲ್ಲ. ನೀವು ಆತಂಕಪಡುವ ಅಗತ್ಯವಿಲ್ಲ. ನಿಶ್ಚಿಂತೆಯಿಂದ ಇರಿ’ ಎಂದು ಸತೀಶ್ ದೇವರಾಜ್‌ ಅವರಿಗೆ ಸಮಾಧಾನಪಡಿಸಿ ಕಳುಹಿಸಿದ್ದಾರೆ.

ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಯಲ್ಲಿ ಗೀತಾವಿಷ್ಣು, ಆತನ ಸ್ನೇಹಿತರಾದ ವಿನೋದ್, ಫೈಸಲ್‌ ಹಾಗೂ ಪ್ರಣವ್ ಅವರ ವಿಚಾರಣೆ ಶನಿವಾರವೂ ಮುಂದುವರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT