ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಚಪ್ಪಲಿ ನಾಪತ್ತೆ!

Last Updated 19 ಜನವರಿ 2018, 19:59 IST
ಅಕ್ಷರ ಗಾತ್ರ

ಬೆಂಗಳೂರು: ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಬನಶಂಕರಿ ಎರಡನೇ ಹಂತದಲ್ಲಿರುವ ಸಂಸದ ಪಿ.ಸಿ. ಮೋಹನ್ ಮನೆಗೆ ಶುಕ್ರವಾರ ಬೆಳಿಗ್ಗೆ ಉಪಾಹಾರಕ್ಕೆ ಹೋದಾಗ ಚಪ್ಪಲಿ ಕಳೆದುಕೊಂಡರು. ಸುಮಾರು 20 ನಿಮಿಷ ಹುಡುಕಾಡಿದ ಬಳಿಕ ಅವರು ಬೇರೆ ಚಪ್ಪಲಿ ಹಾಕಿಕೊಂಡು ಹೋದರು.

ಉಪಾಹಾರ ಮುಗಿಸಿ ಮೊದಲ ಮಹಡಿಯಿಂದ ಇಳಿಯುವಷ್ಟರಲ್ಲಿ ಚಪ್ಪಲಿ ಕಾಣೆಯಾಗಿದ್ದವು. ಮತ್ತೆ ಮೊದಲ ಮಹಡಿಗೆ ತೆರಳಿದ ವೆಂಕಯ್ಯನಾಯ‌್ಡು ಚಪ್ಪಲಿಗಾಗಿ ಹುಡುಕಾಡಿದರು.

ಪಿ.ಸಿ. ಮೋಹನ್ ಮನೆಯವರು, ಕಾರ್ಯಕರ್ತರು, ಪೊಲೀಸರು ಸುಮಾರು 20 ನಿಮಿಷ ಹುಡುಕಾಡಿದರೂ ಚಪ್ಪಲಿ ಸಿಗಲಿಲ್ಲ. ನಾಯ್ಡು ಅವರು ತಮ್ಮ ಕಾರಿನಲ್ಲಿದ್ದ ಮತ್ತೊಂದು ಜೊತೆ ಚಪ್ಪಲಿ ಹಾಕಿಕೊಂಡು ಅಲ್ಲಿಂದ ತೆರಳಿದರು.

‘ಚಪ್ಪಲಿ ಕಳ್ಳತನವಾಗಿಲ್ಲ. ಒಂದೇ ರೀತಿ ಇದ್ದ ಕಾರಣ ಯಾರೋ ಹಾಕಿಕೊಂಡು ಹೋಗಿರಬಹುದು. ಅದೇ ಮಾದರಿ ಚಪ್ಪಲಿ ಬಿಟ್ಟು ಹೋಗಿದ್ದಾರೆ’ ಎಂದು ಪಿ.ಸಿ. ಮೋಹನ್ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT