‘ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಅನಧಿಕೃತ ಕಸಾಯಿಖಾನೆಗಳು ತಲೆ ಎತ್ತಿವೆ. ಗೋಹತ್ಯೆ ಹೆಚ್ಚುತ್ತಿದೆ. ಗೋಪ್ರೇಮಿಗಳಲ್ಲಿ ಆತಂಕ ಮೂಡಿದೆ. ಇದನ್ನು ನಿಯಂತ್ರಿಸುವ ಸಂಕಲ್ಪ ಬಲಕ್ಕಾಗಿ ಯಜ್ಞ ಮಾಡಲಾಗುತ್ತಿದೆ’ ಎಂದು ಗೋ ಸಂರಕ್ಷಣಾ ಪ್ರಕೋಷ್ಠದ ಸಂಚಾಲಕ ಸಿದ್ಧಾರ್ಥ ಗೋಯೆಂಕಾ ಹೇಳಿದರು.
**
ಗೋ ಸಂರಕ್ಷಣಾ ಯಜ್ಞ ನಡೆಸುತ್ತಿರುವುದು ಹಾಗೂ ಗೋ ರಕ್ಷಣೆಗಾಗಿ ಆಂದೋಲನ ನಡೆಸುವ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ
–ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ