ಬೆಂಗಳೂರು: 2008ರ ನವೆಂಬರ್ 26ರಂದು ಮುಂಬೈನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜನ್ಮದಿನದ ನಿಮಿತ್ತ ಟ್ವಿಟರ್ನಲ್ಲಿ ಅನೇಕ ಮಂದಿ ಅವರನ್ನು ಸ್ಮರಿಸಿಕೊಂಡಿದ್ದಾರೆ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಂಸದ ಪ್ರತಾಪ್ ಸಿಂಹ, ಶಾಸಕ ಸಿ.ಟಿ. ರವಿ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಮತ್ತು ಸಾರ್ವಜನಿಕರು ಟ್ವೀಟ್ ಮಾಡಿದ್ದಾರೆ.
26/11ರ ಒತ್ತೆಯಾಳುಗಳನ್ನು ರಕ್ಷಿಸಲು ತಮ್ಮ ಕಿರಿಯ ಸಹೋದ್ಯೋಗಿಗಳನ್ನು ಕಳುಹಿಸಬಹುದಿತ್ತಾದರೂ ನಾಯಕನಾಗಿ "ನಾನೇ ಮುಂದೆ ಹೋಗಿ ಉಗ್ರರರೊಡನೆ ಹೋರಾಡುತ್ತೇನೆ. ನನಗೆ ಕವರ್ ಅಪ್ ಕೊಡಿ" ಎಂದು ಉಗ್ರರೊಡನೆ ಸೆಣಸಿ ವೀರಮರಣವನ್ನಪ್ಪಿದ ಧೀರ ಯೋಧ ಮೇಜರ್ ಸಂದೀಪ್ ಉನ್ನಿಕೃಷ್ಣನ್ರ ಜನ್ಮದಿನವಿಂದು. ನಾಡಿನ ಈ ಧೀರ ಯೋಧನಿಗೆ ನನ್ನ ಸಲ್ಯೂಟ್. pic.twitter.com/jIGtnxKYgX