ಏಕೋ ಕಾದು ನೋಡುವ ಸಂಯಮ ಬಿಜೆಪಿ ನಾಯಕರಲ್ಲಿ ನಶಿಸಿದಂತಿದೆ. ಆತುರದಲ್ಲಿ ಸರ್ಕಾರ ರಚಿಸಿ ಕೈಸುಟ್ಟುಕೊಂಡದ್ದೂ ಇದಕ್ಕೊಂದು ನಿದರ್ಶನ. ಉತ್ತರ ಕರ್ನಾಟಕದಲ್ಲಿ ಕೆಲವು ಕಡೆ ಅಂಗಡಿ, ಮಳಿಗೆಗಳನ್ನು ಒತ್ತಾಯಪೂರ್ವಕವಾಗಿ ಬಂದ್ ಮಾಡಿಸಲಾಯಿತು. ಇಂತಹ ಹುನ್ನಾರಗಳು ಬಿಜೆಪಿಗೆ ಶೋಭೆ ತರುವುದಿಲ್ಲ. ಸಾಲಮನ್ನಾ ವಿಷಯದಲ್ಲಿ ಬಿಜೆಪಿಗೆ ರೈತರ ಪರ ಕಾಳಜಿಗಿಂತ ‘ರಾಜಕೀಯ’ಯೇ ಮುಖ್ಯವಾದಂತಿದೆ. ಇಂತಹ ಎಡವಟ್ಟುಗಳು ಮರುಕಳಿಸದಂತೆ ಎಚ್ಚರ ವಹಿಸುವುದು ಒಳ್ಳೆಯದು.
-ಗಂಗಾಧರ ಅಂಕೋಲೆಕರ, ಧಾರವಾಡ