ನವದೆಹಲಿ: ಮ್ಯಾನ್ಮಾರ್ ಮೂಲಕ ಮಣಿಪುರದೊಳಗೆ ನುಸುಳಲು ಯತ್ನಿಸಿದ್ದ, ಯುಎನ್ಎಲ್ಎಫ್(ಪಿ) ಸಂಘಟನೆಯ 34 ಸಶಸ್ತ್ರ ಬಂಡುಕೋರರು ಅಸ್ಸಾಂ ರೈಫಲ್ಟ್ ಮುಂದೆ ಶರಣಾಗಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಮ್ಯಾನ್ಮಾರ್ನಲ್ಲಿ ಅವರ ವಿರೋಧಿ ಪಡೆ ಪಿಡಿಎಫ್ ಸದಸ್ಯರು ತೀವ್ರ ಗುಂಡಿನ ದಾಳಿ ನಡೆಸಿದ್ದರಿಂದ ಎನ್ಎನ್ಎಲ್ಎಫ್(ಪಿ)ನ ಬಂಡುಕೋರರು, ಶಸ್ತ್ರಾಸ್ತ್ರಗಳ ಸಮೇತ ಶರಣಾದರು. ಎಲ್ಲರನ್ನು ಮಣಿಪುರ ಪೊಲೀಸರ ವಶಕ್ಕೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.