<p><strong>ಆಂಧ್ರಪ್ರದೇಶ:</strong> ವಿಶಾಖಪಟ್ಟಣದ ನಗರಾಭಿವೃದ್ಧಿ ಪ್ರಾಧಿಕಾರದ(ವಿಯುಡಿಎ) ಹಿರಿಯ ಅಧಿಕಾರಿ ಪಸುಪರ್ತಿ ಪ್ರದೀಪ್ ಕುಮಾರ್ ಅವರ ಮನೆ ಮೇಲೆ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ₹60 ಕೋಟಿ ಮೌಲ್ಯದ ಆಸ್ತಿ ಪತ್ತೆ ಮಾಡಿದ್ದಾರೆ.</p>.<p>ಈ ದಾಳಿ ಸೋಮವಾರ ರಾತ್ರಿ ನಡೆದಿದ್ದು, ಜಮೀನು, ನಗದು, ಬೆಲೆಬಾಳುವ ವಸ್ತುಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು <a href="https://www.hindustantimes.com/india-news/govt-official-who-had-silver-made-lamps-flats-land-arrested-for-corruption-andhra-police/story-jKzjmiFgfNCRpopmNwlTcM.html" target="_blank"><strong>‘ಹಿಂದೂಸ್ತಾನ್ ಟೈಮ್ಸ್’</strong></a> ವರದಿ ಮಾಡಿದೆ. </p>.<p>ಪ್ರದೀಪ್ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಒಟ್ಟು 12 ಕಡೆ ದಾಳಿ ನಡೆಸಿದ್ದಾರೆ.</p>.<p>1984ರಲ್ಲಿ ಕಟ್ಟಡ ಮೇಲ್ವಿಚಾರಕರಾಗಿ ಕೆಲಸಕ್ಕೆ ಸೇರಿದ್ದರು. ಆಗ ಅವರು ₹1,300 ವೇತನ ಪಡೆಯುತ್ತಿದ್ದರು.</p>.<p>ಸದ್ಯ ಪ್ರದೀಪ್ ಅವರು ವಿಶಾಖಪಟ್ಟಣದ ನಗರಾಭಿವೃದ್ಧಿ ಪ್ರಾಧಿಕಾರದ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ತಿಂಗಳಿಗೆ ₹ 1 ಲಕ್ಷ ವೇತನ ಪಡೆಯುತ್ತಿದ್ದಾರೆ.</p>.<p>ದಾಳಿ ವೇಳೆ ಐದು ಪ್ಲ್ಯಾಟ್ಗಳು ಹಾಗೂ ಕೃಷ್ಣ, ಕಡಪ, ಅನಂತಪುರ ಜಿಲ್ಲೆಗಳಲ್ಲಿ ಕೃಷಿ ಜಮೀನುನನ್ನು ಹೊಂದಿರುವುದು ತಿಳಿದು ಬಂದಿದ್ದು, ಜಮೀನು ಪ್ರದೀಪ್ ಅವರ ತಂದೆ, ಹೆಂಡತಿ ಹಾಗೂ ಮಗನ ಹೆಸರಿನಲ್ಲಿ ನೊಂದಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>2.7 ಕೆ.ಜಿ ಬಂಗಾರ, 12.5 ಕೆ.ಜಿ ಬೆಳ್ಳಿ, 2 ಪ್ಲಾಟಿನಮ್ ಉಂಗುರಗಳು, ಒಂದು ಕಾರು, ಎರಡು ದ್ವಿಚಕ್ರ ವಾಹನ ಪತ್ತೆಯಾಗಿದೆ. ಜತೆಗೆ, ಮನೆ ಸದಸ್ಯ ಹೆಸರಿನಲ್ಲಿ ₹35 ಲಕ್ಷ ಬ್ಯಾಂಕ್ ಠೇವಣಿ ಇಟ್ಟಿದ್ದಾರೆ. </p>.<p>ಪ್ರದೀಪ್ ಅವರು ಮನೆಯಲ್ಲಿ ಬಳಸುವ ಪಾತ್ರೆ, ಕುಡಿಯುವ ನೀರಿನ ಗ್ಲಾಸ್, ಕೀಗಳು ಎಲ್ಲವನ್ನು ಬೆಳ್ಳಿಯಿಂದಲ್ಲೇ ಮಾಡಿಸಿದ್ದು, ಜತೆಗೆ ಹೆಂಡತಿಗೆ ಚಿನ್ನ ಮತ್ತು ವಜ್ರದ ಆಭರಣಗಳನ್ನು ಖರೀದಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಂಧ್ರಪ್ರದೇಶ:</strong> ವಿಶಾಖಪಟ್ಟಣದ ನಗರಾಭಿವೃದ್ಧಿ ಪ್ರಾಧಿಕಾರದ(ವಿಯುಡಿಎ) ಹಿರಿಯ ಅಧಿಕಾರಿ ಪಸುಪರ್ತಿ ಪ್ರದೀಪ್ ಕುಮಾರ್ ಅವರ ಮನೆ ಮೇಲೆ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ₹60 ಕೋಟಿ ಮೌಲ್ಯದ ಆಸ್ತಿ ಪತ್ತೆ ಮಾಡಿದ್ದಾರೆ.</p>.<p>ಈ ದಾಳಿ ಸೋಮವಾರ ರಾತ್ರಿ ನಡೆದಿದ್ದು, ಜಮೀನು, ನಗದು, ಬೆಲೆಬಾಳುವ ವಸ್ತುಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು <a href="https://www.hindustantimes.com/india-news/govt-official-who-had-silver-made-lamps-flats-land-arrested-for-corruption-andhra-police/story-jKzjmiFgfNCRpopmNwlTcM.html" target="_blank"><strong>‘ಹಿಂದೂಸ್ತಾನ್ ಟೈಮ್ಸ್’</strong></a> ವರದಿ ಮಾಡಿದೆ. </p>.<p>ಪ್ರದೀಪ್ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಒಟ್ಟು 12 ಕಡೆ ದಾಳಿ ನಡೆಸಿದ್ದಾರೆ.</p>.<p>1984ರಲ್ಲಿ ಕಟ್ಟಡ ಮೇಲ್ವಿಚಾರಕರಾಗಿ ಕೆಲಸಕ್ಕೆ ಸೇರಿದ್ದರು. ಆಗ ಅವರು ₹1,300 ವೇತನ ಪಡೆಯುತ್ತಿದ್ದರು.</p>.<p>ಸದ್ಯ ಪ್ರದೀಪ್ ಅವರು ವಿಶಾಖಪಟ್ಟಣದ ನಗರಾಭಿವೃದ್ಧಿ ಪ್ರಾಧಿಕಾರದ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ತಿಂಗಳಿಗೆ ₹ 1 ಲಕ್ಷ ವೇತನ ಪಡೆಯುತ್ತಿದ್ದಾರೆ.</p>.<p>ದಾಳಿ ವೇಳೆ ಐದು ಪ್ಲ್ಯಾಟ್ಗಳು ಹಾಗೂ ಕೃಷ್ಣ, ಕಡಪ, ಅನಂತಪುರ ಜಿಲ್ಲೆಗಳಲ್ಲಿ ಕೃಷಿ ಜಮೀನುನನ್ನು ಹೊಂದಿರುವುದು ತಿಳಿದು ಬಂದಿದ್ದು, ಜಮೀನು ಪ್ರದೀಪ್ ಅವರ ತಂದೆ, ಹೆಂಡತಿ ಹಾಗೂ ಮಗನ ಹೆಸರಿನಲ್ಲಿ ನೊಂದಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>2.7 ಕೆ.ಜಿ ಬಂಗಾರ, 12.5 ಕೆ.ಜಿ ಬೆಳ್ಳಿ, 2 ಪ್ಲಾಟಿನಮ್ ಉಂಗುರಗಳು, ಒಂದು ಕಾರು, ಎರಡು ದ್ವಿಚಕ್ರ ವಾಹನ ಪತ್ತೆಯಾಗಿದೆ. ಜತೆಗೆ, ಮನೆ ಸದಸ್ಯ ಹೆಸರಿನಲ್ಲಿ ₹35 ಲಕ್ಷ ಬ್ಯಾಂಕ್ ಠೇವಣಿ ಇಟ್ಟಿದ್ದಾರೆ. </p>.<p>ಪ್ರದೀಪ್ ಅವರು ಮನೆಯಲ್ಲಿ ಬಳಸುವ ಪಾತ್ರೆ, ಕುಡಿಯುವ ನೀರಿನ ಗ್ಲಾಸ್, ಕೀಗಳು ಎಲ್ಲವನ್ನು ಬೆಳ್ಳಿಯಿಂದಲ್ಲೇ ಮಾಡಿಸಿದ್ದು, ಜತೆಗೆ ಹೆಂಡತಿಗೆ ಚಿನ್ನ ಮತ್ತು ವಜ್ರದ ಆಭರಣಗಳನ್ನು ಖರೀದಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>