ನವದೆಹಲಿ: ‘ದೆಹಲಿ ಸಿ.ಎಂ ಅರವಿಂದ ಕೇಜ್ರಿವಾಲ್ ಅವರು ಸಿಂಹ ಇದ್ದಂತೆ, ಅವರನ್ನು ಮಣಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಅವರ ಪತ್ನಿ ಸುನೀತಾ ಕೇಜ್ರಿವಾಲ್ ಶನಿವಾರ ಹೇಳಿದರು.
ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ಪರ ತಮ್ಮ ಮೊದಲ ರೋಡ್ ಶೋ ನಡೆಸಿದ ಅವರು, ಕೇಜ್ರಿವಾಲ್ ಅವರು ಶಾಲೆಗಳನ್ನು ನಿರ್ಮಿಸಿದ್ದಕ್ಕೆ, ಉಚಿತ ವಿದ್ಯುತ್ ನೀಡಿದ್ದಕ್ಕೆ ಮತ್ತು ಮೊಹಲ್ಲಾ ಕ್ಲಿನಿಕ್ಗಳನ್ನು ತೆರೆದಿದ್ದಕ್ಕಾಗಿ ಜೈಲು ಸೇರಿದ್ದಾರೆ ಎಂದು ಹೇಳಿದರು.
‘ಸರ್ವಾಧಿಕಾರವನ್ನು ತೊಲಗಿಸಿ ಪ್ರಜಾಪ್ರಭುತ್ವವನ್ನು ಉಳಿಸಲು ನಾವು ಮತಚಲಾಯಿಸಬೇಕಿದೆ’ ಎಂದು ಅವರು ಪ್ರತಿಪಾದಿಸಿದರು.