ಬೆರ್ಟ್ರ್ಯಾಂಡ್ ಪ್ಯಾಟ್ರಿಕ್ ಎಂಬುವವರು ದೆಹಲಿಯಿಂದ ಪ್ಯಾರಿಸ್ಗೆ ಹೊರಟಿದ್ದರು. ಭದ್ರತಾ ತಪಾಸಣೆಗಾಗಿ ಸರದಿ ಸಾಲಿನಲ್ಲಿ ನಿಂತಿದ್ದ ವೇಳೆ ಪ್ರಜ್ಞೆ ತಪ್ಪಿ ಬಿದ್ದರು. ಎಕ್ಸ್ ರೇ ತಪಾಸಣೆ ಯಂತ್ರದ ಬಳಿಯಿದ್ದ ಸಿಐಎಸ್ಎಫ್ನ ಸಬ್ ಇನ್ಸ್ಪೆಕ್ಟರ್ ಪುನೀತ್ ಕುಮಾರ್ ತಿವಾರಿ ಅವರು ಕೂಡಲೇ ಪ್ಯಾಟ್ರಿಕ್ ಅವರ ಬಳಿಗೆ ಧಾವಿಸಿ, ಸಿಪಿಆರ್ (ಹೃದಯ ಪುನಃಶ್ಚೇತನ) ಚಿಕಿತ್ಸೆ ನೀಡಿದರು. ಕೆಲ ಸಮಯದಲ್ಲಿಯೇ ಪ್ಯಾಟ್ರಿಕ್ ಎಚ್ಚರಗೊಂಡರು ಎಂದು ವಕ್ತಾರರು ತಿಳಿಸಿದ್ದಾರೆ.