‘ಪ್ರತಿದಿನ ಬೆಳಿಗ್ಗೆ ಎದ್ದಕೂಡಲೇ ಸಾವುನೋವಿನ ಸುದ್ದಿಗಳೇ ರಾಚುತ್ತವೆ. ಇದು ಅಲೆಯಲ್ಲ, ಸುನಾಮಿ. ಎಲ್ಲೆಲ್ಲೂ ಸರತಿ ಸಾಲುಗಳೇ ಕಾಣುತ್ತವೆ. ಆಮ್ಲಜನಕ ಸಿಲಿಂಡರ್ ಪಡೆಯಲು, ಸಿಲಿಂಡರ್ ಭರ್ತಿ ಮಾಡಿಸಲು, ಜೀವರಕ್ಷಣ ಔಷಧ ಖರೀದಿಸಲು, ಆಸ್ಪತ್ರೆಯಲ್ಲಿ ಹಾಸಿಗೆಯನ್ನು ಪಡೆಯಲು, ಸ್ಮಶಾನಗಳಲ್ಲಿ ಹೆಣಗಳನ್ನು ಸುಡಲು ಜನರ ಸಾಲು ಕಾಣುತ್ತಿದೆ. ಭಾರತವು ಕೊರೊನಾ ವೈರಸ್ನ ಕೇಂದ್ರಬಿಂದುವಾಗಿದೆ. ಭಾರತದ ಈ ಪರಿಸ್ಥಿತಿ ಕಂಡು ಇಡೀ ಜಗತ್ತು ಗಾಬರಿಗೊಂಡಿದೆ ಎಂದರು.