ಕೋಲ್ಕತ್ತ: ಸಿಪಿಐ ಹಿರಿಯ ನಾಯಕ ಗುರುದಾಸ್ ದಾಸ್ಗುಪ್ತಾ (83) ಅವರು ದೀರ್ಘಕಾಲದ ಅನಾರೋಗ್ಯದಿಂದ ಗುರುವಾರ ನಿಧನರಾದರು. ಅವರಿಗೆ ಪತ್ನಿ, ಪುತ್ರಿ ಇದ್ದಾರೆ.
‘ಹಲವು ತಿಂಗಳುಗಳಿಂದ ಅವರು ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದರು’ ಎಂದು ಪಶ್ಚಿಮ ಬಂಗಾಳ ಸಿಪಿಐ ಕಾರ್ಯದರ್ಶಿ ಸ್ವಪನ್ ಬ್ಯಾನರ್ಜಿ ತಿಳಿಸಿದ್ದಾರೆ. 1985ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದ ಅವರು, 2004 ಹಾಗೂ 2009ರಲ್ಲಿ ಲೋಕಸಭೆ ಸದಸ್ಯರಾಗಿದ್ದರು.
ಗಣ್ಯರ ಸಂತಾಪ: ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ದಾಸ್ಗುಪ್ತಾ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
‘ದಾಸ್ಗುಪ್ತಾ ಅವರು ತಮ್ಮ ತತ್ವಸಿದ್ಧಾಂತಗಳಿಗೆ ಬದ್ಧರಾಗಿದ್ದರು. ಸಂಸತ್ತಿನಲ್ಲಿ ಅವರದ್ದು ಗಟ್ಟಿ ಧ್ವನಿಯಾಗಿತ್ತು’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.