ಕೇಜ್ರಿವಾಲ್ ಪ್ರತಿಪಾದನೆ
* ನನ್ನ ಬಂಧನವೇ ಅಕ್ರಮ. ಇದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಒಕ್ಕೂಟ ವ್ಯವಸ್ಥೆ ಹಾಗೂ ಪ್ರಜಾಪ್ರಭುತ್ವ ತತ್ವಗಳ ಮೇಲೆ ನಡೆಸಿದ ದಾಳಿಯಾಗಿದೆ.
* ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಬಳಿಕ ನನ್ನ ಬಂಧಿಸಲಾಯಿತು. ಈ ವೇಳೆ ಅನುಸರಿಸಿದ ವಿಧಾನ ಏಜೆನ್ಸಿಯ ನಿರಂಕುಶತೆಯನ್ನು ತೋರಿಸುತ್ತದೆ.
* ಚುನಾವಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ತನ್ನ ಅತಿ ದೊಡ್ಡ ರಾಜಕೀಯ ಎದುರಾಳಿಯಾದ ಎಎಪಿ ಮತ್ತು ಅದರ ನಾಯಕರನ್ನು ಹತ್ತಿಕ್ಕಲು ಇ.ಡಿ ಪಿಎಂಎಲ್ಎ ಕಾನೂನು ಬಳಸುತ್ತಿದೆ.
* ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಗೆ ಸಮಾನ ಅವಕಾಶ ಒದಗಿಸುವಲ್ಲಿ ವಿಫಲವಾಗಿದೆ.
* ₹45 ಕೋಟಿಯನ್ನು ಸೌತ್ ಗ್ರೂಪ್ನಿಂದ ಕಿಕ್ಬ್ಯಾಕ್ ಆಗಿ ಪಡೆದು ಗೋವಾ ಚುನಾವಣೆಯಲ್ಲಿ ಎಎಪಿ ಬಳಸಿದೆ ಎಂದು ಇ.ಡಿ ಆರೋಪಿಸಿದೆ. ಆದರೆ ಈ ಸಂಬಂಧ ಯಾವುದೇ ಸ್ಪಷ್ಟವಾದ ಪುರಾವೆಗಳಿಲ್ಲದೆ ಆಧಾರರಹಿತವಾಗಿ ಆರೋಪಿಸಲಾಗಿದೆ.