ಅಮ್ರೋರಾ ಗ್ರಾಮದ ಬಳಿ ಈ ಘಟನೆ ನಡೆದಿದೆ. ಸುರ್ಸ್ವಾತಿ ರಾಮ್ ಎಂಬಾತ ಶುಕ್ರವಾರ ಮಧ್ಯಾಹ್ನ ತನ್ನ ಜಾನುವಾರುಗಳೊಂದಿಗೆ ಬನ್ಶಿಧರ್ ನಗರ್ ಉಂಟಾರಿಗೆ ತೆರಳುತ್ತಿದ್ದರು. ಬೈಕ್ನಲ್ಲಿದ್ದ ರಾಹುಲ್ ದುಬೆ, ರಾಜೇಶ್ ದುಬೆ ಮತ್ತು ಕಾಶಿನಾಥ್ ಭುಯಾನ್ ಎಂಬುವರು ರಾಮ್ನನ್ನು ಅಡ್ಡಗಟ್ಟಿ, ಹಸು ಕಳ್ಳಸಾಗಣೆ ಆರೋಪ ಹೊರಿಸಿ, ಬಟ್ಟೆ ಬಿಚ್ಚಿಸಿದ್ದಾರೆ. ನಂತರ ಅವರನ್ನು ಬೈಕಿಗೆ ಕಟ್ಟಿಕೊಂಡು ಸ್ವಲ್ಪದೂರ ಎಳೆದೊಯ್ದು, ರಸ್ತೆಯಲ್ಲೇ ಬಿಟ್ಟು ಪರಾರಿಯಾಗಿದ್ದರು. ಗಾಯಾಳು ರಾಮ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.