‘ಚಿಂತಿಸಬೇಕಾದ ಅಗತ್ಯವೇ ಇಲ್ಲ. ನಮ್ಮ ದೇಶದಲ್ಲಿ ಸೈದ್ಧಾಂತಿಕ ಹಿನ್ನೆಲೆಯುಳ್ಳ ಏಕೈಕ ಪಕ್ಷ ಬಿಜೆಪಿ. ಸಿದ್ಧಾಂತವನ್ನು ಅನುಸರಿಸುವ ಇನ್ನೊಂದು ಪಕ್ಷ ಇಲ್ಲ. ಚುನಾವಣೆ ಬಂದಾಗಲೆಲ್ಲ ಕೆಲವರು ಹೀಗಾಗಲಿದೆ, ಹಾಗಾಗಲಿದೆ ಎಂದು ಹೇಳುತ್ತಿರುತ್ತಾರೆ. ಅಂಥವರಿಗೆ, ನೀವ್ಯಾಕೆ ಚಿಂತಿಸುತ್ತೀರಿ ಎಂದು ಕೇಳಲು ಬಯಸುತ್ತೇನೆ. 18 ಕೋಟಿ ಕಾರ್ಯಕರ್ತರಿರುವ ಪಕ್ಷಕ್ಕೆ ಸೇರಿದವರು ನೀವು. ನಿಮ್ಮಿಂದಾದ ಅತ್ಯುತ್ತಮ ಪ್ರಯತ್ನ ಮಾಡಿ’ ಎಂದು ನಡ್ಡಾ ಹೇಳಿದ್ದಾರೆ.