ಸರ್ಕಾರದ ಸಾಧನೆಗೆ ವಿಪಕ್ಷಗಳ ಸಹಕಾರ ಸ್ಮರಿಸಿದರು. ರಫೇಲ್ ಬಗ್ಗೆ ಮಾತನಾಡಲು ಅವಕಾಶ ನೀಡಿದರೆ ಸಂಸತ್ನಲ್ಲಿ ಭೂಕಂಪವಾಗುತ್ತದೆ ಎಂದು ವ್ಯಕ್ತಿಯೊಬ್ಬರು ಹೇಳಿದ್ದರು. ಆದರೆ, ಸದನದಲ್ಲಿ ಕಾಗದದ ವಿಮಾನ ಹಾರಿದ್ದು ಬಿಟ್ಟರೆ ಭೂಕಂಪವಾಗಲೇ ಇಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೆಸರು ಪ್ರಸ್ತಾಪಿಸದೆ ಲೇವಡಿ ಮಾಡಿದರು. ಆಗ ರಾಹುಲ್ ಸದನದಲ್ಲಿ ಇರಲಿಲ್ಲ.