<p>‘ಬೆಂಗಳೂರಿಗೆ ಈ ಸಲನೂ ಕನಿಷ್ಠ ಮತದಾನದ ಕಿರೀಟ ಸಿಕ್ಕೈತಿ. ಈ ವ್ಯಾಪ್ತಿಯ ಮೂರು ಎಂ.ಪಿ. ಕ್ಷೇತ್ರದಾಗೂ ಕಡಿಮೆ ಮತದಾನ’ ಎಂದೆ ಬೇಸರದಿಂದ.</p><p>‘ಐ.ಟಿ ನಗರಿ ಮಣ್ಣುಮಸಿ ಅಂತೆಲ್ಲ ಹಾರಾಡ್ತೀ ರಲ್ಲ, ಈಗ ಗೊತ್ತಾತೇನ್ ನಿಮ್ಮ ಅಸಲಿಯತ್ತು. ಅದೇ ನೋಡು… ಈ ಹುಡುಗಿ ಲಂಡನ್ನಿಂದ ಮಂಡ್ಯಕ್ಕೆ ವೋಟು ಮಾಡಕ್ಕೆ ಅಂತನೇ ಬಂದಾಳಂತೆ’ ಬೆಕ್ಕಣ್ಣ ಹೆಮ್ಮೆಯಿಂದ ಸುದ್ದಿ ಓದಿತು.</p><p>‘ಮಂಡ್ಯದ ಎನ್ಆರ್ಐಗಳು ಭಾಳ ಮಂದಿ ಹಿಂಗೆ ವೋಟ್ ಮಾಡಕ್ಕೆ ಅಂತನೇ ವಾಪಸು ಬಂದಿರಬಕು, ಅದಕ್ಕೇ ಮಂಡ್ಯದಾಗೆ ಶೇ 81 ಮತದಾನ ಆಗೈತಿ’ ಎಂದೆ.</p><p>‘ಏನಿಲ್ಲ... ನಮ್ ಕುಮಾರಣ್ಣ ತೆಲಿಮ್ಯಾಗೆ ಕಮಲ ಹೊತ್ತುಕೊಂಡು ಪ್ರಚಾರ ಮಾಡಿದ್ದಕ್ಕೆ ಅಲ್ಲಿ ಮತದಾನ ಅಷ್ಟು ಪ್ರಮಾಣದಲ್ಲಿ ಆಗೈತಿ!’ ಬೆಕ್ಕಣ್ಣ ಮೀಸೆ ತಿರುವಿತು.</p><p>‘ಮಂಡ್ಯದ ಮಂದಿ ಶಾಣ್ಯಾರು, ಮತದಾನ ಮಾಡ್ಯಾರೆ. ಅದ್ರಾಗೆ ಕುಮಾರಣ್ಣನ ಕರಾಮತ್ತು ಏನೈತಲೇ?’</p><p>‘ಚುನಾವಣೆದಾಗೆ ಗೆದ್ದು ಕೃಷಿ ಮಂತ್ರಿಯಾಗಿ, ಮೋದಿಮಾಮನ ಜೋಡಿ ಸೇರಿ ರೈತರ ಸೇವಾ ಮಾಡತೀನಿ ಅಂತ ಮಾತು ಕೊಟ್ಟಿದ್ದಕ್ಕೆ ಭಾಳ ಮಂದಿ ಮತದಾನ ಮಾಡ್ಯಾರೆ’ ಬೆಕ್ಕಣ್ಣ ಉಲಿಯಿತು.</p><p>‘ಅಲ್ಲಲೇ… ಕರುನಾಡಿಂದ ಅಷ್ಟೊಂದು ಮಂದಿ ಲೋಕಸಭೆಗೆ, ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿದ್ರೂ ನಮಗೆ ಬರ ಪರಿಹಾರ ಕೊಡಿಸಲಿಲ್ಲ. ನಿರ್ಮಲಕ್ಕನ್ನ ಎರಡು ಸಲ ಇಲ್ಲಿಂದನೇ ರಾಜ್ಯಸಭೆಗೆ ಕಳಿಸಿದ್ರೂ ಏನೂ ಉಪಯೋಗಿಲ್ಲ. ಇನ್ನು ರೈತರಿಗೆ ಕುಮಾರಣ್ಣ-ಮೋದಿಮಾಮನ ಜೋಡಿ ಸೇವೆಯೊಂದು ಬಾಕಿ ಉಳಿದೈತಿ’.</p><p>‘ನೀ ಸುಮ್ಸುಮ್ನೆ ಹಂಗಿಸಬ್ಯಾಡ. ಚುನಾವಣೆ ನೀತಿ ಸಂಹಿತೆ ಜಾರಿಲಿದ್ರೂ ಮೋದಿಮಾಮ ಕರ್ನಾಟಕಕ್ಕೆ ಈಗ ಸುಮಾರು ಮೂರೂವರೆ ಸಾವಿರ ಕೋಟಿ ಬರ ಪರಿಹಾರದ ರೊಕ್ಕ ಕೊಟ್ಟಿಲ್ಲೇನ್?’</p><p>‘ಅವರು ತಮ್ಮ ಕಿಸೆದಾಗಿಂದ ತೆಗೆದು ಕೊಟ್ಟಾರೇನು? ಸುಪ್ರೀಂ ಕೋರ್ಟು ಚಲೋತ್ನಾಗೆ ಚಾಟಿ ಬೀಸಿದ ಮ್ಯಾಗೆ ಕೊಟ್ಟಾರೆ. ಇಷ್ಟಾಗಿ, ನಾವು ಕೇಳಿದ್ದರಲ್ಲಿ ಕಾಲುಭಾಗನೂ ಕೊಟ್ಟಿಲ್ಲ’.</p><p>‘ಕೋರ್ಟು ಹೇಳಿದ್ದನ್ನು ಒಪ್ಯಾರೆ ಅಂದ್ರೆ ನಮ್ ಮೋದಿಮಾಮ ಎಷ್ಟ್ ಗ್ರೇಟು ಹೌದಿಲ್ಲೋ’ ಬೆಕ್ಕಣ್ಣನ ವಿತಂಡವಾದಕ್ಕೆ ನಾನು ಬೆಪ್ಪಾದೆ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಬೆಂಗಳೂರಿಗೆ ಈ ಸಲನೂ ಕನಿಷ್ಠ ಮತದಾನದ ಕಿರೀಟ ಸಿಕ್ಕೈತಿ. ಈ ವ್ಯಾಪ್ತಿಯ ಮೂರು ಎಂ.ಪಿ. ಕ್ಷೇತ್ರದಾಗೂ ಕಡಿಮೆ ಮತದಾನ’ ಎಂದೆ ಬೇಸರದಿಂದ.</p><p>‘ಐ.ಟಿ ನಗರಿ ಮಣ್ಣುಮಸಿ ಅಂತೆಲ್ಲ ಹಾರಾಡ್ತೀ ರಲ್ಲ, ಈಗ ಗೊತ್ತಾತೇನ್ ನಿಮ್ಮ ಅಸಲಿಯತ್ತು. ಅದೇ ನೋಡು… ಈ ಹುಡುಗಿ ಲಂಡನ್ನಿಂದ ಮಂಡ್ಯಕ್ಕೆ ವೋಟು ಮಾಡಕ್ಕೆ ಅಂತನೇ ಬಂದಾಳಂತೆ’ ಬೆಕ್ಕಣ್ಣ ಹೆಮ್ಮೆಯಿಂದ ಸುದ್ದಿ ಓದಿತು.</p><p>‘ಮಂಡ್ಯದ ಎನ್ಆರ್ಐಗಳು ಭಾಳ ಮಂದಿ ಹಿಂಗೆ ವೋಟ್ ಮಾಡಕ್ಕೆ ಅಂತನೇ ವಾಪಸು ಬಂದಿರಬಕು, ಅದಕ್ಕೇ ಮಂಡ್ಯದಾಗೆ ಶೇ 81 ಮತದಾನ ಆಗೈತಿ’ ಎಂದೆ.</p><p>‘ಏನಿಲ್ಲ... ನಮ್ ಕುಮಾರಣ್ಣ ತೆಲಿಮ್ಯಾಗೆ ಕಮಲ ಹೊತ್ತುಕೊಂಡು ಪ್ರಚಾರ ಮಾಡಿದ್ದಕ್ಕೆ ಅಲ್ಲಿ ಮತದಾನ ಅಷ್ಟು ಪ್ರಮಾಣದಲ್ಲಿ ಆಗೈತಿ!’ ಬೆಕ್ಕಣ್ಣ ಮೀಸೆ ತಿರುವಿತು.</p><p>‘ಮಂಡ್ಯದ ಮಂದಿ ಶಾಣ್ಯಾರು, ಮತದಾನ ಮಾಡ್ಯಾರೆ. ಅದ್ರಾಗೆ ಕುಮಾರಣ್ಣನ ಕರಾಮತ್ತು ಏನೈತಲೇ?’</p><p>‘ಚುನಾವಣೆದಾಗೆ ಗೆದ್ದು ಕೃಷಿ ಮಂತ್ರಿಯಾಗಿ, ಮೋದಿಮಾಮನ ಜೋಡಿ ಸೇರಿ ರೈತರ ಸೇವಾ ಮಾಡತೀನಿ ಅಂತ ಮಾತು ಕೊಟ್ಟಿದ್ದಕ್ಕೆ ಭಾಳ ಮಂದಿ ಮತದಾನ ಮಾಡ್ಯಾರೆ’ ಬೆಕ್ಕಣ್ಣ ಉಲಿಯಿತು.</p><p>‘ಅಲ್ಲಲೇ… ಕರುನಾಡಿಂದ ಅಷ್ಟೊಂದು ಮಂದಿ ಲೋಕಸಭೆಗೆ, ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿದ್ರೂ ನಮಗೆ ಬರ ಪರಿಹಾರ ಕೊಡಿಸಲಿಲ್ಲ. ನಿರ್ಮಲಕ್ಕನ್ನ ಎರಡು ಸಲ ಇಲ್ಲಿಂದನೇ ರಾಜ್ಯಸಭೆಗೆ ಕಳಿಸಿದ್ರೂ ಏನೂ ಉಪಯೋಗಿಲ್ಲ. ಇನ್ನು ರೈತರಿಗೆ ಕುಮಾರಣ್ಣ-ಮೋದಿಮಾಮನ ಜೋಡಿ ಸೇವೆಯೊಂದು ಬಾಕಿ ಉಳಿದೈತಿ’.</p><p>‘ನೀ ಸುಮ್ಸುಮ್ನೆ ಹಂಗಿಸಬ್ಯಾಡ. ಚುನಾವಣೆ ನೀತಿ ಸಂಹಿತೆ ಜಾರಿಲಿದ್ರೂ ಮೋದಿಮಾಮ ಕರ್ನಾಟಕಕ್ಕೆ ಈಗ ಸುಮಾರು ಮೂರೂವರೆ ಸಾವಿರ ಕೋಟಿ ಬರ ಪರಿಹಾರದ ರೊಕ್ಕ ಕೊಟ್ಟಿಲ್ಲೇನ್?’</p><p>‘ಅವರು ತಮ್ಮ ಕಿಸೆದಾಗಿಂದ ತೆಗೆದು ಕೊಟ್ಟಾರೇನು? ಸುಪ್ರೀಂ ಕೋರ್ಟು ಚಲೋತ್ನಾಗೆ ಚಾಟಿ ಬೀಸಿದ ಮ್ಯಾಗೆ ಕೊಟ್ಟಾರೆ. ಇಷ್ಟಾಗಿ, ನಾವು ಕೇಳಿದ್ದರಲ್ಲಿ ಕಾಲುಭಾಗನೂ ಕೊಟ್ಟಿಲ್ಲ’.</p><p>‘ಕೋರ್ಟು ಹೇಳಿದ್ದನ್ನು ಒಪ್ಯಾರೆ ಅಂದ್ರೆ ನಮ್ ಮೋದಿಮಾಮ ಎಷ್ಟ್ ಗ್ರೇಟು ಹೌದಿಲ್ಲೋ’ ಬೆಕ್ಕಣ್ಣನ ವಿತಂಡವಾದಕ್ಕೆ ನಾನು ಬೆಪ್ಪಾದೆ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>