<p>‘ಮೋದಿಮಾಮ ಹೊಸ ವರ್ಷಕ್ಕೆ ಮುಂಚೇನೆ ಗಾಂಧಿ ಬಿಟ್ಟವ್ರೆ, ನೀವೇನ್ ಬಿಟ್ಟೀರಿ?’ ಕೆದಕಿದ ಗುದ್ಲಿಂಗ.</p>.<p>‘ಬಿಡಕ್ಕೆ ಏನು ಬಾಕಿ ಅದೆ? ಹೆಂಡತಿ ಚಟ ಎಲ್ಲಾ ಬಿಡ್ಸವ್ಳೆ. ಬಾಸು ಹಟ ಬಿಡ್ಸವ್ನೆ. ಬೈಯೋದನ್ನ ಸರ್ಕಾರನೇ ಬಿಡ್ಸೈತೆ’ ಎಂದ ಮಾಲಿಂಗ.</p>.<p>‘ನಮ್ಮ ರಾಜಕೀಯದೋರು ಪ್ರತಿ ಪಿತೃಪಕ್ಷಕ್ಕೆ ಮಾತೃಪಕ್ಷಕ್ಕೇ ಎಳ್ಳು–ನೀರು ಬಿಡ್ತಾರೆ. ನಾವು ಏನ್ ಬಿಡಕ್ಕಾಗುತ್ತೆ?’</p>.<p>‘ನಾನು ಎಣ್ಣೆ ಬಿಡ್ಬೇಕು ಅಂದ್ಕೊಂಡೆ. ಆದ್ರೆ ಎಣ್ಣೆ <br>ಮೇಲೆ ಸಮಸ್ತ ಗ್ಯಾರಂಟಿ ನಿಂತಿದೆ. ಹಂಗಾಗಿ ನಾನು <br>ಎಣ್ಣೆ ಬಿಟ್ರೆ ಜನಕ್ಕೆ ದ್ರೋಹ ಮಾಡಿದಂಗಾಗುತ್ತೆ ಅಂತ ಸುಮ್ಕಾದೆ’.</p>.<p>‘ನಾನೂ ಅಷ್ಟೇ! ಗುಟ್ಕಾ ಬಿಟ್ರೆ ನಮ್ಮ ರೈತರಿಗೆ ಶಾನೆ ಅನ್ಯಾಯ ಮಾಡಿದಂಗಾಗುತ್ತೆ ಅಂತ ನನ್ ಸಂಕಲ್ಪಾನ<br />ಒಳಗೇ ನುಂಗ್ಕೊಂಡಿದೀನಿ’ ಎಂದು ಕಾಳಜಿಯ ಧ್ವನಿಯಲ್ಲಿ ಹೇಳುತ್ತಾ ಪಿಚಕ್ಕನೆ ಉಗಿದ ಭದ್ರ.</p>.<p>‘ಹೌದೌದು, ಭಾರೀ ರಗಳೆ ಮಾರಾಯ. ಸಾಲ ಮಾಡೋದು ಬಿಟ್ರೆ ದೇಶದ ಆರ್ಥಿಕತೇನೆ ಹಾಳಾಗುತ್ತೆ. ಅದ್ಕೇ ಎಲ್ಲಾ ಸೊಸೈಟೀಲು ಸುಸ್ತಿ ಆಗಿವ್ನಿ’.</p>.<p>‘ಲೇಯ್, ಈಗ ಬಿಡೋ ಕಾಲ ಅಲ್ರಲೇ, ಬಿಡ್ದೇ ಇರೋ ಟ್ರೆಂಡ್! ಸಿಎಂ ತಲೆ ಮೇಲೆ ತಲೆ ಬಿದ್ರೂ ಕುರ್ಚಿ ಬಿಡಲ್ಲ ಅಂತ ಸಂಕಲ್ಪ ಮಾಡವ್ರೆ. ಡಿಸಿಎಂ ಎಷ್ಟೇ ಊಟದ ಆಟ ಆಡುದ್ರೂ ಇಟ್ಟ ಗೂಟ ತೆಗೆಯಲ್ಲ ಅಂತ ಶಪಥ ಮಾಡವ್ರೆ’ ಎಂದ ಕಲ್ಲೇಶಿ.</p>.<p>‘ಊ ಕಣ್ಲಾ, ಕೈಕಮಾಂಡೂ ಅಷ್ಟೇ! ಯಾರು ಎಷ್ಟಾರಾ ಬಾಯ್ ಬಡ್ಕಳಿ, ನಾವು ಮಧ್ಯೆ ತಲೆ ಆಕಕಿಲ್ಲ ಅಂತ ಸಂಕಲ್ಪ ಮಾಡವ್ರೆ’.</p>.<p>‘ಕೆಲವ್ರುದ್ದು ಮಾತ್ರ ಬಿಡಂಗಿಲ್ಲ, ಕಟ್ಕಳೋಂಗಿಲ್ಲ ಅನ್ನೋ ಧರ್ಮಸಂಕಟ! ಬಗೆಹರೀಲಿಲ್ಲ ಕುರ್ಚಿ ಕಗ್ಗಂಟು, ಆಗಲಿಲ್ಲ ಸುಸೂತ್ರ ಹೆರ್ಗೆ, ಆಟಕ್ಕಿಲ್ಲ ತಾವು ಲೆಕ್ಕಕ್ಕುಂಟು ಅಂತ ಕೈ ಚೆಲ್ಲವ್ರೆ ಖರ್ಗೆ’ ಎಂದ ಪರ್ಮೇಶಿ’.</p>.<p>ಎಲ್ಲಾ ಗೊಳ್ಳನೆ ನಕ್ಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಮೋದಿಮಾಮ ಹೊಸ ವರ್ಷಕ್ಕೆ ಮುಂಚೇನೆ ಗಾಂಧಿ ಬಿಟ್ಟವ್ರೆ, ನೀವೇನ್ ಬಿಟ್ಟೀರಿ?’ ಕೆದಕಿದ ಗುದ್ಲಿಂಗ.</p>.<p>‘ಬಿಡಕ್ಕೆ ಏನು ಬಾಕಿ ಅದೆ? ಹೆಂಡತಿ ಚಟ ಎಲ್ಲಾ ಬಿಡ್ಸವ್ಳೆ. ಬಾಸು ಹಟ ಬಿಡ್ಸವ್ನೆ. ಬೈಯೋದನ್ನ ಸರ್ಕಾರನೇ ಬಿಡ್ಸೈತೆ’ ಎಂದ ಮಾಲಿಂಗ.</p>.<p>‘ನಮ್ಮ ರಾಜಕೀಯದೋರು ಪ್ರತಿ ಪಿತೃಪಕ್ಷಕ್ಕೆ ಮಾತೃಪಕ್ಷಕ್ಕೇ ಎಳ್ಳು–ನೀರು ಬಿಡ್ತಾರೆ. ನಾವು ಏನ್ ಬಿಡಕ್ಕಾಗುತ್ತೆ?’</p>.<p>‘ನಾನು ಎಣ್ಣೆ ಬಿಡ್ಬೇಕು ಅಂದ್ಕೊಂಡೆ. ಆದ್ರೆ ಎಣ್ಣೆ <br>ಮೇಲೆ ಸಮಸ್ತ ಗ್ಯಾರಂಟಿ ನಿಂತಿದೆ. ಹಂಗಾಗಿ ನಾನು <br>ಎಣ್ಣೆ ಬಿಟ್ರೆ ಜನಕ್ಕೆ ದ್ರೋಹ ಮಾಡಿದಂಗಾಗುತ್ತೆ ಅಂತ ಸುಮ್ಕಾದೆ’.</p>.<p>‘ನಾನೂ ಅಷ್ಟೇ! ಗುಟ್ಕಾ ಬಿಟ್ರೆ ನಮ್ಮ ರೈತರಿಗೆ ಶಾನೆ ಅನ್ಯಾಯ ಮಾಡಿದಂಗಾಗುತ್ತೆ ಅಂತ ನನ್ ಸಂಕಲ್ಪಾನ<br />ಒಳಗೇ ನುಂಗ್ಕೊಂಡಿದೀನಿ’ ಎಂದು ಕಾಳಜಿಯ ಧ್ವನಿಯಲ್ಲಿ ಹೇಳುತ್ತಾ ಪಿಚಕ್ಕನೆ ಉಗಿದ ಭದ್ರ.</p>.<p>‘ಹೌದೌದು, ಭಾರೀ ರಗಳೆ ಮಾರಾಯ. ಸಾಲ ಮಾಡೋದು ಬಿಟ್ರೆ ದೇಶದ ಆರ್ಥಿಕತೇನೆ ಹಾಳಾಗುತ್ತೆ. ಅದ್ಕೇ ಎಲ್ಲಾ ಸೊಸೈಟೀಲು ಸುಸ್ತಿ ಆಗಿವ್ನಿ’.</p>.<p>‘ಲೇಯ್, ಈಗ ಬಿಡೋ ಕಾಲ ಅಲ್ರಲೇ, ಬಿಡ್ದೇ ಇರೋ ಟ್ರೆಂಡ್! ಸಿಎಂ ತಲೆ ಮೇಲೆ ತಲೆ ಬಿದ್ರೂ ಕುರ್ಚಿ ಬಿಡಲ್ಲ ಅಂತ ಸಂಕಲ್ಪ ಮಾಡವ್ರೆ. ಡಿಸಿಎಂ ಎಷ್ಟೇ ಊಟದ ಆಟ ಆಡುದ್ರೂ ಇಟ್ಟ ಗೂಟ ತೆಗೆಯಲ್ಲ ಅಂತ ಶಪಥ ಮಾಡವ್ರೆ’ ಎಂದ ಕಲ್ಲೇಶಿ.</p>.<p>‘ಊ ಕಣ್ಲಾ, ಕೈಕಮಾಂಡೂ ಅಷ್ಟೇ! ಯಾರು ಎಷ್ಟಾರಾ ಬಾಯ್ ಬಡ್ಕಳಿ, ನಾವು ಮಧ್ಯೆ ತಲೆ ಆಕಕಿಲ್ಲ ಅಂತ ಸಂಕಲ್ಪ ಮಾಡವ್ರೆ’.</p>.<p>‘ಕೆಲವ್ರುದ್ದು ಮಾತ್ರ ಬಿಡಂಗಿಲ್ಲ, ಕಟ್ಕಳೋಂಗಿಲ್ಲ ಅನ್ನೋ ಧರ್ಮಸಂಕಟ! ಬಗೆಹರೀಲಿಲ್ಲ ಕುರ್ಚಿ ಕಗ್ಗಂಟು, ಆಗಲಿಲ್ಲ ಸುಸೂತ್ರ ಹೆರ್ಗೆ, ಆಟಕ್ಕಿಲ್ಲ ತಾವು ಲೆಕ್ಕಕ್ಕುಂಟು ಅಂತ ಕೈ ಚೆಲ್ಲವ್ರೆ ಖರ್ಗೆ’ ಎಂದ ಪರ್ಮೇಶಿ’.</p>.<p>ಎಲ್ಲಾ ಗೊಳ್ಳನೆ ನಕ್ಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>