<p>ಹೊಸ ನ್ಯೂಸ್ ಚಾನೆಲ್ಗೆ ವರದಿಗಾರರ ಸಂದರ್ಶನ ನಡೀತಿತ್ತು. ಹರಟೆಕಟ್ಟೆ ಕಾಯಂ ಸದಸ್ಯ ಗುಡ್ಡೆ ಹಾಜರಾಗಿದ್ದ.</p>.<p>ಸಂದರ್ಶಕರು ಕೇಳಿದರು: ‘ಗುಡ್ಡೆಯವರೇ ಈ ರಾಜಕೀಯ ಅಂದ್ರೇನು?’</p>.<p>‘ಹುಚ್ಚಾಸ್ಪತ್ರೆ ಸಾ...’ ಫಟ್ ಅಂತ ಹೇಳಿದ ಗುಡ್ಡೆ.</p>.<p>‘ವ್ಹಾಟ್! ಏನ್ರಿ ಹಾಗಂದ್ರೆ?’</p>.<p>‘ಅಲ್ಲ, ರಾಜಕೀಯದೋರು ಪರಸ್ಪರ ಬೈಕೊಳೋದು ಹಂಗೇ ಅಲ್ವ ಸಾ, ಮಾತೆತ್ತಿದ್ರೆ ಅವ್ರನ್ನ ಇವ್ರು, ಇವ್ರನ್ನ ಅವ್ರು ನಿಮ್ಹಾನ್ಸ್ಗೆ ಸೇರಿಸಬೇಕು ಅಂತಿರ್ತಾರಲ್ಲ, ಅದ್ಕೇ ಹಾಗಂದೆ...’</p>.<p>‘ಓ, ಹಾಗಾ... ಸರಿ, ಈಗ ಕರ್ನಾಟಕದ ಹೊಸ ಸಿಎಂ ಯಾರಾಗಬಹುದು?’</p>.<p>‘ಈಗಿನ ಪರಿಸ್ಥಿತಿ ನೋಡಿದ್ರೆ ನಾನೂ ಆಗಬೋದು ಸಾ...’ ಗುಡ್ಡೆ ನಕ್ಕ.</p>.<p>‘ಒಳ್ಳೆ ಆಸಾಮಿ ಕಣ್ರಿ, ಈಗ ಡಿಕೆಶಿ ಸಾಹೇಬ್ರು ನಾನು ಸಾಮಾನ್ಯ ಕಾರ್ಯಕರ್ತನಾಗೇ ಇರ್ತೀನಿ ಅಂದ್ರೆ ಏನರ್ಥ?’</p>.<p>‘ಸಿಎಂ ಕುರ್ಚಿ ಎಲ್ಲೋ ಮಿಸ್ ಹೊಡೀತಿದೆ ಅಂತ ಅರ್ಥ...’</p>.<p>‘ಜಾರಕಿಹೊಳಿ ಸಾಹೇಬ್ರು ಸಿಎಂ ಬದಲಾಗಬಹುದು, ಆಗದೇ ಇರಬಹುದು ಅಂದ್ರಲ್ಲ ಯಾಕೆ?’</p>.<p>‘ಸಿಎಂ ಕುರ್ಚಿ ಬಗ್ಗೆ ಅವರಿಗೆ ಏನೋ ಸುಳಿವು ಸಿಕ್ಕಿದೆ ಅಂತ ಅರ್ಥ...’</p>.<p>‘ಈಗ ಇದ್ದಕ್ಕಿದ್ದಂತೆ ಅಹಿಂದ ಸಮಾವೇಶ ಮಾಡ್ತಿರೋದ್ಯಾಕೆ?’</p>.<p>‘ಇರೋ ಸಿಎಂ ಕುರ್ಚಿನ ಇನ್ನಷ್ಟು ಭದ್ರ ಮಾಡೋಕೆ... ಅಹಿಂದ ಅನ್ನೋ ಸಿಮೆಂಟ್..!’</p>.<p>‘ವೆರಿಗುಡ್... ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಸಾಹೇಬ್ರು ಫೆಬ್ರುವರೀಲಿ ರಾಜ್ಯ ಪ್ರವಾಸ ಮಾಡ್ತಿರೋದ್ಯಾಕೆ?’</p>.<p>‘ಅದೂ ಕುರ್ಚಿ ಭದ್ರ ಮಾಡ್ಕಳೋ ಪ್ಲಾನೇ... ಸಿಮೆಂಟ್ ಬೇರೆ...’</p>.<p>‘ಕೊನೇ ಪ್ರಶ್ನೆ, ದ್ವೇಷ ಭಾಷಣಕ್ಕೆ ಸಮಾನಾರ್ಥಕ ಪದ ಏನು?’</p>.<p>‘ಬಿಜೆಪಿಯವರ ಪ್ರಕಾರ ರಾಹುಲ್ ಗಾಂಧಿಯವರ ವಿದೇಶ ಭಾಷಣ!’</p>.<p>‘ಯೂ ಆರ್ ಸೆಲೆಕ್ಟೆಡ್..!’ ಎಂದರು ಸಂದರ್ಶಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊಸ ನ್ಯೂಸ್ ಚಾನೆಲ್ಗೆ ವರದಿಗಾರರ ಸಂದರ್ಶನ ನಡೀತಿತ್ತು. ಹರಟೆಕಟ್ಟೆ ಕಾಯಂ ಸದಸ್ಯ ಗುಡ್ಡೆ ಹಾಜರಾಗಿದ್ದ.</p>.<p>ಸಂದರ್ಶಕರು ಕೇಳಿದರು: ‘ಗುಡ್ಡೆಯವರೇ ಈ ರಾಜಕೀಯ ಅಂದ್ರೇನು?’</p>.<p>‘ಹುಚ್ಚಾಸ್ಪತ್ರೆ ಸಾ...’ ಫಟ್ ಅಂತ ಹೇಳಿದ ಗುಡ್ಡೆ.</p>.<p>‘ವ್ಹಾಟ್! ಏನ್ರಿ ಹಾಗಂದ್ರೆ?’</p>.<p>‘ಅಲ್ಲ, ರಾಜಕೀಯದೋರು ಪರಸ್ಪರ ಬೈಕೊಳೋದು ಹಂಗೇ ಅಲ್ವ ಸಾ, ಮಾತೆತ್ತಿದ್ರೆ ಅವ್ರನ್ನ ಇವ್ರು, ಇವ್ರನ್ನ ಅವ್ರು ನಿಮ್ಹಾನ್ಸ್ಗೆ ಸೇರಿಸಬೇಕು ಅಂತಿರ್ತಾರಲ್ಲ, ಅದ್ಕೇ ಹಾಗಂದೆ...’</p>.<p>‘ಓ, ಹಾಗಾ... ಸರಿ, ಈಗ ಕರ್ನಾಟಕದ ಹೊಸ ಸಿಎಂ ಯಾರಾಗಬಹುದು?’</p>.<p>‘ಈಗಿನ ಪರಿಸ್ಥಿತಿ ನೋಡಿದ್ರೆ ನಾನೂ ಆಗಬೋದು ಸಾ...’ ಗುಡ್ಡೆ ನಕ್ಕ.</p>.<p>‘ಒಳ್ಳೆ ಆಸಾಮಿ ಕಣ್ರಿ, ಈಗ ಡಿಕೆಶಿ ಸಾಹೇಬ್ರು ನಾನು ಸಾಮಾನ್ಯ ಕಾರ್ಯಕರ್ತನಾಗೇ ಇರ್ತೀನಿ ಅಂದ್ರೆ ಏನರ್ಥ?’</p>.<p>‘ಸಿಎಂ ಕುರ್ಚಿ ಎಲ್ಲೋ ಮಿಸ್ ಹೊಡೀತಿದೆ ಅಂತ ಅರ್ಥ...’</p>.<p>‘ಜಾರಕಿಹೊಳಿ ಸಾಹೇಬ್ರು ಸಿಎಂ ಬದಲಾಗಬಹುದು, ಆಗದೇ ಇರಬಹುದು ಅಂದ್ರಲ್ಲ ಯಾಕೆ?’</p>.<p>‘ಸಿಎಂ ಕುರ್ಚಿ ಬಗ್ಗೆ ಅವರಿಗೆ ಏನೋ ಸುಳಿವು ಸಿಕ್ಕಿದೆ ಅಂತ ಅರ್ಥ...’</p>.<p>‘ಈಗ ಇದ್ದಕ್ಕಿದ್ದಂತೆ ಅಹಿಂದ ಸಮಾವೇಶ ಮಾಡ್ತಿರೋದ್ಯಾಕೆ?’</p>.<p>‘ಇರೋ ಸಿಎಂ ಕುರ್ಚಿನ ಇನ್ನಷ್ಟು ಭದ್ರ ಮಾಡೋಕೆ... ಅಹಿಂದ ಅನ್ನೋ ಸಿಮೆಂಟ್..!’</p>.<p>‘ವೆರಿಗುಡ್... ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಸಾಹೇಬ್ರು ಫೆಬ್ರುವರೀಲಿ ರಾಜ್ಯ ಪ್ರವಾಸ ಮಾಡ್ತಿರೋದ್ಯಾಕೆ?’</p>.<p>‘ಅದೂ ಕುರ್ಚಿ ಭದ್ರ ಮಾಡ್ಕಳೋ ಪ್ಲಾನೇ... ಸಿಮೆಂಟ್ ಬೇರೆ...’</p>.<p>‘ಕೊನೇ ಪ್ರಶ್ನೆ, ದ್ವೇಷ ಭಾಷಣಕ್ಕೆ ಸಮಾನಾರ್ಥಕ ಪದ ಏನು?’</p>.<p>‘ಬಿಜೆಪಿಯವರ ಪ್ರಕಾರ ರಾಹುಲ್ ಗಾಂಧಿಯವರ ವಿದೇಶ ಭಾಷಣ!’</p>.<p>‘ಯೂ ಆರ್ ಸೆಲೆಕ್ಟೆಡ್..!’ ಎಂದರು ಸಂದರ್ಶಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>