ಮುಂಬೈ: ಟ್ರ್ಯಾಕ್ಟರ್– ಎಸ್ಯುವಿ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ 6 ಮಂದಿ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ಪಶ್ಚಿಮ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಡೆದಿದೆ.
ರತ್ನಗಿರಿ–ಪಂಡರಾಪುರ ರಸ್ತೆಯ ಮಿರಾಜ್ ಬಳಿ ಬೆಳಿಗ್ಗೆ 11 ಗಂಟೆಗೆ ಅಪಘಾತ ಸಂಭವಿಸಿದೆ.
ಮೃತರಲ್ಲಿ 12 ವರ್ಷದ ಬಾಲಕ ಮತ್ತು ಒಬ್ಬ ಮಹಿಳೆ ಸಹ ಇದ್ದಾರೆ. ಎಸ್ಯುವಿ ವಾಹನದ ಇನ್ನಿಬ್ಬರು ಗಾಯಾಳುಗಳು ಮಿರಾಜ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊಲ್ಹಾಪುರದಿಂದ ರತ್ನಗಿರಿ ಕಡೆಗೆ ಸಂಚರಿಸುತ್ತಿದ್ದ ಎಸ್ಯುವಿ ವಾಹನ ಮತ್ತು ಇಟ್ಟಿಗೆ ತುಂಬಿದ್ದ ಎದುರುಗಡೆಯಿಂದ ಬರುತ್ತಿದ್ದ ಟ್ರ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅತ್ಯಂತ ವೇಗ, ನಿರ್ಲಕ್ಷ್ಯದ ಆರೋಪದ ಮೇಲೆ ಟ್ರ್ಯಾಕ್ಟರ್ ಚಾಲಕನನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ.