ಪಂಜಾಬ್ನ ಲೂಧಿಯಾನದಲ್ಲಿ ನಡೆದ ನಕಲಿ ವೀಸಾ ಪ್ರಕರಣ ಸಂಬಂಧ ಬೇಗ್ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿತ್ತು. ಬೇಗ್ ಲ್ಯಾಂಡ್ ಆದ ಕೂಡಲೇ ವಿಮಾನ ನಿಲ್ದಾಣದ ಅಧಿಕಾರಿಗಳು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅವರು ಬೇಗ್ನನ್ನು ವಶಕ್ಕೆ ಪಡೆದು ದೆಹಲಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ಎಂದು ಪೊಲೀಸ್ ಉಪ ಆಯುಕ್ತೆ ಉಶಾ ರಂಗನಾಣಿಯವರು ತಿಳಿಸಿದ್ದಾರೆ.
ನಕಲಿ ವೀಸಾ ಪ್ರಕರಣವನ್ನು ಉಲ್ಲೇಖಿಸಿದ ರಂಗನಾಣಿ, ಲೂಧಿಯಾನಾದ ಹರ್ವಿಂದರ್ ಸಿಂಗ್ ಧನೋವಾ ಎಂಬಾತ ಕೆಲವು ತಿಂಗಳ ಹಿಂದೆ, ಏಜೆಂಟ್ ಮುಸ್ಕಾನ್ ಉರ್ಫ್ ಮನ್ಪ್ರೀತ್ ಕೌರ್ ಒದಗಿಸಿದ ಕೆನಡಾದ ನಕಲಿ ವೀಸಾದಲ್ಲಿ ಪ್ರಯಾಣಿಸುತ್ತಿದ್ದ. ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ಮತ್ತೊಬ್ಬ ಏಜೆಂಟ್ ಸಾದಿಕುಲ್ಲಾ ಬೇಗ್ಗೆ ₹5 ಲಕ್ಷ ನೀಡಿದ್ದಾಗಿ ಹೇಳಿದ್ದ ಎಂದು ತಿಳಿಸಿದ್ದಾರೆ.