ಮುಂಬೈ (ಪಿಟಿಐ): ಪ್ರಧಾನಿ ಅಭ್ಯರ್ಥಿ ಕುರಿತಾಗಿ ವಿರೋಧಪಕ್ಷಗಳ ಒಕ್ಕೂಟ ‘ಇಂಡಿಯಾ’ಕ್ಕೆ ಹಲವು ಆಯ್ಕೆಗಳಿವೆ ಆದರೆ ಬಿಜೆಪಿಗಿರುವುದು ಒಂದೇ ಆಯ್ಕೆ ಎಂದು ಶಿವಸೇನಾ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ಬುಧವಾರ ಹೇಳಿದ್ದಾರೆ.
ಗ್ರ್ಯಾಂಡ್ ಹಯಾತ್ ಹೋಟೆಲ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಆಯ್ಕೆಯ ಕುರಿತು ಬಿಜೆಪಿಯವರಲ್ಲಿ ಕೇಳಿದರೆ ಕಳೆದ ಒಂಬತ್ತು ವರ್ಷಗಳಿಂದಲೂ ಅವರಿಗಿರುವುದು ಒಂದೇ ಆಯ್ಕೆ ಎಂದಿದ್ದಾರೆ.
ರಕ್ಷಾ ಬಂಧನದ ಉಡುಗೊರೆಯಾಗಿ ಕೇಂದ್ರ ಸರ್ಕಾರವು ಎಲ್ಪಿಜಿ ಸಿಲಿಂಡರ್ ದರವನ್ನು ₹200ರಷ್ಟು ಕಡಿಮೆಗೊಳಿಸಿರುವುಕ್ಕೆ ಪ್ರತಿಕ್ರಿಯಿಸಿದ ಅವರು, ಕಳೆದ ಒಂಬತ್ತು ವರ್ಷಗಳಲ್ಲಿ ರಕ್ಷಾ ಬಂಧನ ಇರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.