ಚಂಡೀಗಢ: ಪಂಜಾಬ್ನ ವಿವಿಧೆಡೆ ಶನಿವಾರ ಅಕಾಲಿಕವಾಗಿ ಮಳೆ ಸುರಿದಿದ್ದು, ಗೋಧಿ ಬೆಳೆಗಾರರು ಆತಂಕಗೊಂಡಿದ್ದಾರೆ.
ಕಳೆದ ವರ್ಷದ ಅಕ್ಟೋಬರ್ ಮತ್ತು ಡಿಸೆಂಬರ್ನಲ್ಲಿ ಬಿತ್ತನೆ ಮಾಡಿರುವ ಗೋಧಿ ಫಸಲು ಕೊಯ್ಲಿಗೆ ಬಂದಿದೆ. ಏಪ್ರಿಲ್ 1ರಿಂದ ಪಂಜಾಬ್ ಹಾಗೂ ಹರಿಯಾಣದಲ್ಲಿ ಗೋಧಿ ಸಂಗ್ರಹಣೆ ಆರಂಭವಾಗಲಿದೆ. ಈ ವೇಳೆಯೇ ಮಳೆ ಹಾಗೂ ಗಾಳಿಯ ವೇಗವು ಹೆಚ್ಚಿದ್ದು, ಫಸಲು ನೆಲಕಚ್ಚಿದೆ.
ಬಟಿಂಡಾ, ಫಾಜಿಲ್ಕಾ, ಲೂಧಿಯಾನ, ಪಾಟಿಯಾಲ, ಅಮೃತಸರ ಹಾಗೂ ಪಠಾಣ್ಕೋಟ್ನಲ್ಲಿ ಮಳೆ ಸುರಿದಿದೆ. ಕೆಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ.
ಮಾಲ್ವಾ ಭಾಗದಲ್ಲಿ ಅತಿಹೆಚ್ಚು ಫಸಲು ಹಾನಿಗೀಡಾಗಿದೆ. ಈ ಬಗ್ಗೆ ಸಮೀಕ್ಷೆ ನಡೆಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಶಿರೋಮಣಿ ಅಕಾಲಿ ದಳವು, ಸರ್ಕಾರಕ್ಕೆ ಒತ್ತಾಯಿಸಿದೆ.