ನವದೆಹಲಿ: ‘ದೇಶವನ್ನು ರಕ್ಷಿಸುವ ಸಲುವಾಗಿ ಭಾರತೀಯ ಸಶಸ್ತ್ರಪಡೆಗಳು ಈಗ ಗಡಿಯನ್ನು ದಾಟಲು ಹಿಂಜರಿಯುವುದಿಲ್ಲ’ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಬಾಲಾಕೋಟ್ ವಾಯುದಾಳಿಯ ಮೊದಲ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಭಯೋತ್ಪಾದನೆಯನ್ನು ಎದುರಿಸುವ ವಿಧಾನದಲ್ಲಿ ಭಾರತ ಬದಲಾವಣೆ ಕಂಡುಕೊಂಡಿದೆ. ಈ ಬದಲಾವಣೆ ತಂದಿದ್ದಕ್ಕಾಗಿ ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಹೇಳಿದರು.
‘2016ರ ಸರ್ಜಿಕಲ್ ಸ್ಟ್ರೈಕ್ ಮತ್ತು 2019ರ ಬಾಲಾಕೋಟ್ ವಾಯುದಾಳಿಗಳು ಬದಲಾವಣೆಗೆ ಸಾಕ್ಷಿಯಾಗಿವೆ. ಇದು ಖಂಡಿತವಾಗಿಯೂ ಹೊಸ ಮತ್ತು ವಿಶ್ವಾಸಾರ್ಹ ಭಾರತ’ ಎಂದೂ ರಾಜನಾಥ್ ಸಿಂಗ್ ತಮ್ಮ ಸರಣಿ ಟ್ವೀಟ್ಗಳಲ್ಲಿ ತಿಳಿಸಿದ್ದಾರೆ.