ಸಿಬಿಐ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ತಾವು ಬಯಸಿದಂತೆಯೇ ತನಿಖೆ ನಡೆಸುವಂತೆ ತನಿಖಾಧಿಕಾರಿಗಳಿಗೆ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿದ್ದ ರಾಜೀವ್ ಕುಮಾರ್ ಸೂಚನೆ ನೀಡುತ್ತಿದ್ದರು. ರಾಜಕಾರಣಿಗಳಿಗೆ ಸೇರಿರುವ ಹಗರಣದ ಮಹತ್ವದ ದಾಖಲೆ ಹೊಂದಿದ್ದ ಲ್ಯಾಪಟಾಪ್, ಮೊಬೈಲ್ ಫೋನ್ಗಳನ್ನು ವಾಪಸ್ ಮಾಡಲು ಅನುಮತಿ ನೀಡಿದ್ದರು. ಈಗ ಅವುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಸುಪ್ರೀಂ ಕೋರ್ಟ್ಗೆ ತಿಳಿಸಿದರು.