<p><strong>ಸಂದೇಶ್ಖಾಲಿ (ಪಶ್ಚಿಮ ಬಂಗಾಳ)</strong>: ಹಿಂಸಾಚಾರ ಪೀಡಿತ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್ಖಾಲಿಯ ಪರಿಸ್ಥಿತಿ ಅತ್ಯಂತ ಭೀಕರವಾಗಿದೆ ಮತ್ತು ಅರಾಜಕತೆಗೆ ಸ್ಪಷ್ಟ ನಿದರ್ಶನವಾಗಿದೆ ಎಂದು ಬಿಜೆಪಿ ಹಿರಿಯ ನಾಯಕ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ಮಂಗಳವಾರ ಹೇಳಿದ್ದಾರೆ.</p>.<p>ಕಲ್ಕತ್ತಾ ಹೈಕೋರ್ಟ್ನಿಂದ ಅನುಮತಿ ಪಡೆದ ನಂತರ ಮಂಗಳವಾರ ಮಧ್ಯಾಹ್ನ ಸಂದೇಶ್ಖಾಲಿಗೆ ಬಿಜೆಪಿ ಶಾಸಕ ಶಂಕರ್ ಘೋಷ್ ಅವರಿಗೊಂದಿಗೆ ಭೇಟಿ ನೀಡಿ, ಮಹಿಳೆಯರು ಸೇರಿದಂತೆ ಸ್ದಳೀಯರೊಂದಿಗೆ ಮಾತನಾಡಿದರು. </p>.<p>ತಲೆಮರೆಸಿಕೊಂಡಿರುವ ಶಹಜಹಾನ್ ಶೇಖ್ ಸೇರಿದಂತೆ ಸ್ಥಳೀಯ ಟಿಎಂಸಿ ನಾಯಕರಿಂದ ತಮಗೆ ಆಗಿರುವ ಅನುಭವವನ್ಳು ನಯರು ಬಿಜೆಪಿ ನಾಯಕರೊಂದಿಗೆ ಹಂಚಿಕೊಂಡರು.</p>.<p>‘ಸ್ಥಳೀಯರ ಅನುಭವಗಳು ಭಯಾನಕವಾಗಿವೆ. ಅವರ ಭೂಮಿ ಕಬಳಿಸಲಾಗಿದೆ. ಮಹಿಳೆಯರ ಶೋಷಣೆ ಮಾಡಲಾಗಿದೆ. ಎಲ್ಲವೂ ಪೊಲೀಸ್ ಮತ್ತು ಆಡಳಿತದ ನೆರವಿನಿಂದಲೇ ನಡೆದಿದೆ. ಇಲ್ಲಿ ಅರಾಜಕತೆ ಉಂಟಾಗಿದೆ ಎಂಬುದಕ್ಕೆ ಈ ಪ್ರದೇಶ ಸ್ಪಷ್ಟ ನಿದರ್ಶನವಾಗಿದೆ’ ಎಂದು ಸುವೆಂದು ಹೇಳಿದರು. </p>.<h2>ಇದು ವಾತಾವರಣ ಕೆಡಿಸುವ ಪ್ರಯತ್ನ: </h2>.<p>ಸುವೆಂದು ಅಧಿಕಾರಿ ಮತ್ತು ಶಾಸಕ ಶಂಕರ್ ಘೋಷ್ ಸಂದೇಶ್ಖಾಲಿಗೆ ಭೇಟಿ ನೀಡಿರುವುದಕ್ಕೆ ಪ್ರತಿಕ್ರಿಯಿಸಿದ ಟಿಎಂಸಿ, ‘ಇದು ವಾತಾವರಣ ಹಾಳು ಮಾಡುವ ಪ್ರಯತ್ನ’ ಎಂದು ಹೇಳಿದೆ. </p>.<p>‘ಈ ಪ್ರದೇಶದಿಂದ ಕೆಲವು ದೂರುಗಳು ಬಂದಿರುವುದು ನಿಜ. ಸರ್ಕಾರವು ಅವುಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿವೆ. ಆದರೆ ಬಿಜೆಪಿ ಸಮಸ್ಯೆಗೆ ಕೋಮು ಬಣ್ಣ ಹಚ್ಚಿ ವಾತಾವರಣ ಕೆಡಿಸಲು ಪ್ರಯತ್ನಿಸುತ್ತಿದೆ’ ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಪ್ರತಿಕ್ರಿಯಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂದೇಶ್ಖಾಲಿ (ಪಶ್ಚಿಮ ಬಂಗಾಳ)</strong>: ಹಿಂಸಾಚಾರ ಪೀಡಿತ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್ಖಾಲಿಯ ಪರಿಸ್ಥಿತಿ ಅತ್ಯಂತ ಭೀಕರವಾಗಿದೆ ಮತ್ತು ಅರಾಜಕತೆಗೆ ಸ್ಪಷ್ಟ ನಿದರ್ಶನವಾಗಿದೆ ಎಂದು ಬಿಜೆಪಿ ಹಿರಿಯ ನಾಯಕ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ಮಂಗಳವಾರ ಹೇಳಿದ್ದಾರೆ.</p>.<p>ಕಲ್ಕತ್ತಾ ಹೈಕೋರ್ಟ್ನಿಂದ ಅನುಮತಿ ಪಡೆದ ನಂತರ ಮಂಗಳವಾರ ಮಧ್ಯಾಹ್ನ ಸಂದೇಶ್ಖಾಲಿಗೆ ಬಿಜೆಪಿ ಶಾಸಕ ಶಂಕರ್ ಘೋಷ್ ಅವರಿಗೊಂದಿಗೆ ಭೇಟಿ ನೀಡಿ, ಮಹಿಳೆಯರು ಸೇರಿದಂತೆ ಸ್ದಳೀಯರೊಂದಿಗೆ ಮಾತನಾಡಿದರು. </p>.<p>ತಲೆಮರೆಸಿಕೊಂಡಿರುವ ಶಹಜಹಾನ್ ಶೇಖ್ ಸೇರಿದಂತೆ ಸ್ಥಳೀಯ ಟಿಎಂಸಿ ನಾಯಕರಿಂದ ತಮಗೆ ಆಗಿರುವ ಅನುಭವವನ್ಳು ನಯರು ಬಿಜೆಪಿ ನಾಯಕರೊಂದಿಗೆ ಹಂಚಿಕೊಂಡರು.</p>.<p>‘ಸ್ಥಳೀಯರ ಅನುಭವಗಳು ಭಯಾನಕವಾಗಿವೆ. ಅವರ ಭೂಮಿ ಕಬಳಿಸಲಾಗಿದೆ. ಮಹಿಳೆಯರ ಶೋಷಣೆ ಮಾಡಲಾಗಿದೆ. ಎಲ್ಲವೂ ಪೊಲೀಸ್ ಮತ್ತು ಆಡಳಿತದ ನೆರವಿನಿಂದಲೇ ನಡೆದಿದೆ. ಇಲ್ಲಿ ಅರಾಜಕತೆ ಉಂಟಾಗಿದೆ ಎಂಬುದಕ್ಕೆ ಈ ಪ್ರದೇಶ ಸ್ಪಷ್ಟ ನಿದರ್ಶನವಾಗಿದೆ’ ಎಂದು ಸುವೆಂದು ಹೇಳಿದರು. </p>.<h2>ಇದು ವಾತಾವರಣ ಕೆಡಿಸುವ ಪ್ರಯತ್ನ: </h2>.<p>ಸುವೆಂದು ಅಧಿಕಾರಿ ಮತ್ತು ಶಾಸಕ ಶಂಕರ್ ಘೋಷ್ ಸಂದೇಶ್ಖಾಲಿಗೆ ಭೇಟಿ ನೀಡಿರುವುದಕ್ಕೆ ಪ್ರತಿಕ್ರಿಯಿಸಿದ ಟಿಎಂಸಿ, ‘ಇದು ವಾತಾವರಣ ಹಾಳು ಮಾಡುವ ಪ್ರಯತ್ನ’ ಎಂದು ಹೇಳಿದೆ. </p>.<p>‘ಈ ಪ್ರದೇಶದಿಂದ ಕೆಲವು ದೂರುಗಳು ಬಂದಿರುವುದು ನಿಜ. ಸರ್ಕಾರವು ಅವುಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿವೆ. ಆದರೆ ಬಿಜೆಪಿ ಸಮಸ್ಯೆಗೆ ಕೋಮು ಬಣ್ಣ ಹಚ್ಚಿ ವಾತಾವರಣ ಕೆಡಿಸಲು ಪ್ರಯತ್ನಿಸುತ್ತಿದೆ’ ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಪ್ರತಿಕ್ರಿಯಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>