ಮುಂಬೈ: ಶಿವಸೇನಾ ಹೆಸರು ಮತ್ತು ಚಿಹ್ನೆಗಾಗಿ ಕಾದಾಟ ಮುಂದುವರಿದಿದೆ. ಫೆ.17ರಂದು ಚುನಾವಣಾ ಆಯೋಗವು, ಮೂಲ ‘ಶಿವಸೇನಾ‘ ಹೆಸರು ಹಾಗೂ ‘ಬಿಲ್ಲು–ಬಾಣ‘ ಗುರುತು ಮುಖ್ಯಮಂತ್ರಿ ಏಕನಾಥ ಶಿಂದೆ ಬಣಕ್ಕೆ ಸೇರಿದ್ದು ಎಂಬ ತೀರ್ಪು ಕೊಟ್ಟಿತ್ತು. ಇದರಿಂದ ಉದ್ದವ್ ಠಾಕ್ರೆ ಬಣಕ್ಕೆ ತೀವ್ರ ಮುಖಭಂಗವಾಗಿತ್ತು. ಚುನಾವಣಾ ಆಯೋಗ ಕೊಟ್ಟ ತೀರ್ಪನ್ನು ಪ್ರಶ್ನಿಸಿ ಉದ್ದವ್ ಅವರು ಸುಪ್ರೀಂಕೋರ್ಟ್ಗೆ ಸೋಮವಾರ ಅರ್ಜಿ ಸಲ್ಲಿಸಿದ್ದಾರೆ.