ನವದೆಹಲಿ: ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಗದ್ದಲ ಎಬ್ಬಿಸಿದ ಎಐಎಡಿಎಂಕೆ, ಟಿಡಿಪಿ ಮತ್ತು ವೈಎಸ್ಆರ್ ಕಾಂಗ್ರೆಸ್ನ ಒಟ್ಟು 21 ಸದಸ್ಯರನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಗುರುವಾರ ಅಮಾನತು ಮಾಡಿದ್ದಾರೆ. ಎಐಎಡಿಎಂಕೆಯ ಐವರು ಸದಸ್ಯರನ್ನು ಬುಧವಾರವೇ ಅಮಾನತು ಮಾಡಿದ್ದರು. ಇದರೊಂದಿಗೆ ಅಮಾನತಾದ ಸದಸ್ಯರ ಸಂಖ್ಯೆ 45ಕ್ಕೆ ಏರಿದೆ.