‘ರಾಜಕೀಯ ಪಕ್ಷವೊಂದು ತನ್ನ ಹಿತಾಸಕ್ತಿ ರಕ್ಷಿಸಿಕೊಳ್ಳಲು ಇವಿಎಂಗಳಿಗೆ ಕನ್ನ ಹಾಕಿತ್ತು ಎಂಬ ಆರೋಪದ ಬಗ್ಗೆ ಎಫ್ಐಆರ್ ದಾಖಲಿಸಿ, ತನಿಖೆ ನಡೆಸಬೇಕು. ತನಿಖಾ ವರದಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಬೇಕು’ ಎಂಬ ಮನವಿ ವಕೀಲ ಎಂ.ಎಲ್. ಶರ್ಮ ಸಲ್ಲಿಸಿರುವ ಅರ್ಜಿಯಲ್ಲಿದೆ. ಇವಿಎಂಗಳ ಗುಣಮಟ್ಟ, ಅವುಗಳಲ್ಲಿ ಬಳಸಿರುವ ತಂತ್ರಾಂಶ ಮತ್ತು ಕನ್ನ ಹಾಕುವುದರಿಂದ ಆಗುವ ಪರಿಣಾಮ ಕುರಿತು ವಿಶ್ವಾಸಾರ್ಹ ಎಲೆಕ್ಟ್ರಾನಿಕ್ ಮತ್ತು ಸಾಫ್ಟ್ವೇರ್ ತಜ್ಞರಿಂದ ಪರಿಶೀಲನೆ ನಡೆಸಬೇಕು ಎಂದು ಶರ್ಮ ಕೋರಿದ್ದಾರೆ.