ಜಾಗೃತಿ ಕೊರತೆ, ದೇಹ ವಿಕಾರಗೊಳ್ಳುವ ಹೆದರಿಕೆ ಮತ್ತು ಧಾರ್ಮಿಕ ನಂಬಿಕೆಗಳ ಕಾರಣದಿಂದ ಕಳೆದ ಹದಿನೆಂಟು ವರ್ಷಗಳಲ್ಲಿ ಬೆರಳೆಣಿಕೆಯಷ್ಟು ಕಳೇಬರಗಳು ದಾನವಾಗಿ ಬಂದಿವೆ. ಹಾಗಾಗಿ ಈ ಸಂಸ್ಥೆಯ ಕಾರ್ಯವು ಇನ್ನೂ ಪ್ರಾರಂಭಿಕ ಹಂತದಲ್ಲೇ ಇದೆ.
‘ಮೃತರ ದೇಹದಿಂದ ಮೂಳೆಯನ್ನು ಹೊರತೆಗೆದ ನಂತರ ಮರದ ತುಂಡುಗಳನ್ನು ಒಳಸೇರಿಸಿ ದೇಹಕ್ಕೆ ಮೂಲ ರೂಪ ನೀಡಲಾಗುವುದು’ ಎಂದು ಮಲ್ಹೋತ್ರಾ ಹೇಳಿದ್ದಾರೆ.