ಸಮಿತಿ ಸದಸ್ಯರಾದ ವಿ.ಆರ್. ಸುದರ್ಶನ್, ಚಂದ್ರಕಾಂತ ಬೆಲ್ಲದ್, ಮಾಲಿಕಯ್ಯ ಗುತ್ತೇದಾರ್, ಮೋಹನ್ ಲಿಂಬಿಕಾಯಿ, ಪ್ರೊ. ಮಲ್ಲಿಕಾರ್ಜುನ್, ರೋಷನ್ ಬೇಗ್ ಹಾಗೂ ಶಿವಲಿಂಗೇಗೌಡ ಮೊದಲಾದವರು ಅಧ್ಯಕ್ಷರ ಜತೆಗಿದ್ದರು. ಬೆಂಗಳೂರು- ಮೈಸೂರು ಹೆದ್ದಾರಿ ಮತ್ತು ಬೆಂಗಳೂರು ವಿಮಾನ ನಿಲ್ದಾಣ ಯೋಜನೆಗೆ ಸರ್ಕಾರ ಅಗತ್ಯ ಭೂಮಿ ಒದಗಿಸಿದೆ. ಆದರೆ, ಈ ಯೋಜನೆಗಳು ನಿರೀಕ್ಷಿತ ಸೇವೆ ಒದಗಿಸಲು ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಯೋಜನೆಗಳನ್ನು ಪರಿಶೀಲನೆಗೆ ಒಳಪಡಿಸುವ ಅಗತ್ಯವಿದೆ ಎಂದರು.