ಸಬ್ ಇನ್ಸ್ಪೆಕ್ಟರ್ ಅನುರಾಗ್ ಸಿಂಗ್ ಹಾಗೂ ಕಾನ್ಸ್ಟೆಬಲ್ ಗಿರಿಜೇಶ್ ಗಸ್ತು ತಿರುಗುತ್ತಿದ್ದರು. ಆಗ ಸಮೀಪದ ರಾಮಲೀಲಾ ಮೈದಾನದ ಬಳಿ ವ್ಯಕ್ತಿಯೊಬ್ಬ ಅನುಮಾನಾಸ್ಪದ ಚಟುವಟಿಕೆಯಲ್ಲಿ ತೊಡಗಿದ್ದುದನ್ನು ಗಮನಿಸಿದ ಅವರು, ತಪಾಸಣೆಗಾಗಿ ಆತನನ್ನು ತಡೆಯಲು ಮುಂದಾದರು. ಆಗ ಆತ ಅನುರಾಗ್ ಸಿಂಗ್ ಅವರತ್ತ ಗುಂಡು ಹಾರಿಸಿ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಹುಲ್ ಶ್ರೀವಾಸ್ತವ ತಿಳಿಸಿದ್ದಾರೆ.