ಚೆನ್ನೈ (ಪಿಟಿಐ): ಹಿರಿಯ ಸಿನಿಮಾ ನಿರ್ದೇಶಕ ಹಾಗೂ ನಿರ್ಮಾಪಕ ಕೆ. ಬಾಲಚಂದರ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಆದರೆ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದ ಬಾಲಚಂದರ್(84) ಅವರನ್ನು ಡಿ.3ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ‘ಬಾಲಚಂದರ್ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದ್ದು, ಅವರ ಸೋಂಕು ಸ್ಥಿತಿ ಗಂಭೀರವಾಗುತ್ತಿದೆ’ ಎಂದು ವೈದ್ಯರು ತಿಳಿಸಿದ್ದಾರೆ.
ಡಿಎಂಕೆ ಹಿರಿಯ ಮುಖಂಡ ಎಂ.ಕೆ ಸ್ಟ್ಯಾಲಿನ್, ನಟಿಯರಾದ ಖುಷ್ಬೂ, ಕೆ. ಆರ್ ವಿಜಯಾ, ನಿರ್ದೇಶಕ ವಿಕ್ರಮನ್ ಮತ್ತು ನಟರಾದ ವಿಜಯ್ ಕುಮಾರ್ ಮತ್ತು ರಾಜೇಶ್ ಅವರು ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿದರು.
‘ಉತ್ತಮ್ ವಿಲನ್‘ ಚಿತ್ರೀಕರಣಕ್ಕಾಗಿ ಲಾಸ್ಏಂಜಲೀಸ್ನಲ್ಲಿರುವ ಕಮಲ್ ಹಾಸನ್ ವಿಡಿಯೊ ಕರೆ ಮೂಲಕ ತಮ್ಮ ಗುರು ಕೆ. ಬಾಲಚಂದರ್ ಅವರೊಂದಿಗೆ ಮಾತನಾಡಿದ್ದಾರೆ.