ಪ್ರಧಾನಿಯವರು ಸಮರ್ಪಕವಾಗಿ ಅರ್ಥೈಸಿಕೊಂಡಿರುವ ಕಾರಣ ದೇಶದ ಮುಸ್ಲಿಮರು ಈಗ ನಿರಾಳವಾಗಿ ಉಸಿರಾಡಬಹುದು ಎಂದಿದ್ದಾರೆ.
ಪ್ರಧಾನಿ ಹೇಳಿಕೆಯ ಬಗ್ಗೆ ಸಂಶಯಪಡಬೇಕಾದ್ದು ಏನೂ ಇಲ್ಲ ಎಂದು ತೀಲಿ ವಾಲಿ ಮಸೀದಿಯ ಪಾದ್ರಿ ಮೌಲಾನಾ ಫಜ್ಲುಲ್ ರೆಹಮಾನ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಈಶ್ಬಾಗ್ ಈದ್ಗಾದ ಮುಖ್ಯಸ್ಥರಾದ ಮೌಲಾನಾ ಖಾಲಿದ್ ರಶೀದ್ ಫಾರಂಗಿ ಮಹಾಲಿ ಪ್ರತಿಕ್ರಿಯಿಸಿ, ಭಾರತದ ಮುಸಲ್ಮಾನರು ಸದಾ ದೇಶಕ್ಕೆ ನಿಷ್ಠರಾಗಿರುತ್ತಾರೆ. ಬಿಜೆಪಿ ನಾಯಕರು ಮುಸ್ಲಿಮರ ಮೇಲೆ ಆರೋಪ ಹೊರಿಸುತ್ತಿರುವುದನ್ನು ತಡೆಯಬೇಕು ಎಂದಿದ್ದಾರೆ.
ದೇವ್ಬಾದ್ ದಾರುಲ್ ಉಲೂಮ್ ಮೌಲಾನಾ ನಸೀಮ್ ಅಖ್ತರ್ ಶಾ ಕೈಸರ್ ಅವರೂ ಮೋದಿ ಹೇಳಿಕೆಯನ್ನು ಸ್ವಾಗತಿಸಿದ್ದಾರೆ.