‘2019ರ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಎದುರಾಳಿಗಳನ್ನು ಒಗ್ಗೂಡಿಸುವ ಯತ್ನ ನಡೆಯುತ್ತಿದೆ. ದೊಡ್ಡ ಪ್ರವಾಹ ಬಂದಾಗ ಎಲ್ಲವೂ ಕೊಚ್ಚಿಕೊಂಡು ಹೋಗುತ್ತವೆ. ಆದರೆ ಆಲದಮರ ಮಾತ್ರ ಉಳಿಯುತ್ತದೆ. ಜೀವ ಉಳಿಸಿಕೊಳ್ಳುವ ಸಲುವಾಗಿ ಹಾವು, ಮುಂಗುಸಿ, ನಾಯಿ, ಬೆಕ್ಕುಗಳು ಮರವನ್ನೇರುತ್ತವೆ’ ಎಂದು ಶಾ ಹೇಳಿದ್ದಾರೆ.