ಲಖನೌ: ಉತ್ತರಪ್ರದೇಶದ ಮುಜಾಫರ್ ನಗರ ಜಿಲ್ಲಾ ಮತ್ತು ಅಕ್ಕಪಕ್ಕದ ಪಟ್ಟಣಗಳಲ್ಲಿ ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ 41ಕ್ಕೆ ಏರಿದೆ. 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಮುಜಾಫರ್ನಗರವೊಂದರಲ್ಲೇ 32 ಜನ, ಮೀರತ್ನಲ್ಲಿ ಇಬ್ಬರು, ಹಾಪುರ, ಬಾಗ್ಪತ್, ಸಹರಾಪುರ ಹಾಗೂ ಶಾಮಿ್ಲಯಲಿ್ಲ ತಲಾ ಒಬ್ಬೊಬ್ಬರು ಸೇರಿ ಪಶ್ಚಿಮ ಉತ್ತರಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಹಲವರು ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಆಸ್ಪತೆ್ರಗಳಿಗೆ ದಾಖಲಿಸಿ ಚಿಕಿತೆ್ಸ ಕೊಡಿಸಲಾಗುತಿ್ತದೆ. ಪರಿಸಿ್ಥತಿ ಈಗ ನಿಯಂತ್ರಣಕೆ್ಕ ಬಂದಿದೆ ಎಂದು ರಾಜ್ಯ ಗೃಹ ಕಾರ್ಯದರ್ಶಿ ಕಮಲ್ ಸಕ್ಸೇನ ತಿಳಿಸಿದ್ದಾರೆ.
ಈ ನಡುವೆ, ಗಲಭೆಯಲಿ್ಲ ದುಷ್ಕರ್ಮಿಗಳು ದಾಳಿ ನಡೆಸಲು ಹರಿತ ಆಯುಧಗಳು, ದೊಣ್ಣೆ, ಸ್ಥಳೀಯವಾಗಿ ತಯಾರಿಸಿದ ಪಿಸ್ತೂಲ್ಗಳು ಮತ್ತಿತರ ಮಾರಕಾಸ್ತ್ರಗಳನ್ನು ಬಳಸಿರುವ ಸಾಧ್ಯತೆ ಇದೆ ಎಂದು ಜಿಲ್ಲಾಸ್ಪತೆ್ರ ಮುಖ್ಯ ವೈದ್ಯಾಧಿಕಾರಿ ಡಾ. ವಿ.ಕೆ. ಜೋಹರಿ ಬಣ್ಣಿಸಿದ್ದಾರೆ.
ಸರ್ಕಾರದ ಕಠಿಣ ಕ್ರಮ: ಕೋಮುಗಲಭೆ ಸಂಬಂಧ ಸುಮಾರು 400 ಜನರನ್ನು ಬಂಧಿಸಲಾಗಿದೆ. 1500ಕ್ಕೂ ಹೆಚ್ಚಿನ ಬಂದೂಕು ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ. ಪೊಲೀಸರು, ಇತರ ಭದ್ರತಾ ಸಿಬ್ಬಂದಿ ಮತ್ತು ಸೇನೆಯ ಸಹಕಾರದಿಂದ ತೀವ್ರ ಕಾರಣೆ ಕೈಗೊಂಡು, ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.
ಗಲಭೆಗ್ರಸ್ತ ಪ್ರದೇಶಗಳಲ್ಲಿ ಮಂಗಳವಾರವೂ ಸೇನೆ ಪಥಸಂಚಲನ ನಡೆಸುವುದರೊಂದಿಗೆ ಕರ್ಫ್ಯೂ ಮುಂದುವರಿದಿದೆ.
ನಾಗರಿಕರಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅನುವಾಗುವಂತೆ ಕೆಲಕಾಲ ಕರ್ಫ್ಯೂವನು್ನ ಸಡಿಲಿಸಲಾಗಿತ್ತು.
ಮುಜಾಫರ್-ನಗರದಲ್ಲಿ ಪರಿಸ್ಥಿತಿ ಸುಧಾರಿಸಿದರೂ, ಸುತ್ತಮುತ್ತಲ ಜಿಲ್ಲೆಗಳಿಗೂ ಕೋಮು ಗಲಭೆ ಹಬ್ಬಿರುವುದು ಆತಂಕಕ್ಕೀಡು ಮಾಡಿದೆ. ಈ ಹಿನ್ನೆಲೆಯಲ್ಲಿ ಗಲಭೆ ಪ್ರದೇಶಗಳಿಗೆ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ.
ರಾಜ್ಯ ಸರ್ಕಾರ ಯಾವುದೇ ಬಗೆಯ ಸಭೆಗಳನು್ನ ಅಥವಾ ಪಂಚಾಯತ್ಗಳನು್ನ ನಡೆಸದಂತೆ ನಿಷೇಧ ಹೇರಿದೆ. ಹಿಂಸೆಯನು್ನ ಪ್ರಚೋದಿಸುವ ಆರೋಪಿಗಳ ವಿರುದ್ಧ ಎನ್ಎಸ್ಎ (ರಾಷ್ಟ್ರೀಯ ಭದ್ರತಾ ಸಂಸೆ್ಥ) ಬಳಸುವುದರ ಬಗೆ್ಗ ಚಿಂತನೆ ನಡೆಸಿದೆ.
ನಿಷೇಧಾಜ್ಞೆ ಉಲ್ಲಂಘಿಸಲು ಯತ್ನಿಸಿದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಹುಕುಂ ಸಿಂಗ್, ಶಾಸಕರಾದ ಸುರೇಶ್ ರಾಣಾ, ಸಂಗೀತ್ಸಾಮ್, ಭರ್ತೇಂದು, ಕಾಂಗ್ರೆಸ್ ಮುಖಂಡ ಹರೇಂದ್ರ ಮಲಿಕ್ ಮತ್ತಿತರರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಕೇಂದ್ರ ಸಚಿವ ಅಜಿತ್ ಸಿಂಗ್, ಬಿಜೆಪಿಯ ರವಿಶಂಕರ್ ಪ್ರಸಾದ್ ಸೇರಿ ಕೆಲವು ಹಿರಿಯ ನಾಯಕರು ಸೋಮವಾರ ಮುಜಾಫರ್ನಗರಕ್ಕೆ ಹೋಗಲು ಯತ್ನಿಸಿದ್ದು, ಆದರೆ ಮಾರ್ಗಮಧ್ಯೆ ಅವರನ್ನು ತಡೆಯಲಾಯಿತು.
ಹಿಂಸೆ ತಡೆಯಲು ವಿಫಲರಾದ ಅನೇಕ ಹಿರಿಯ ಪೊಲೀಸ್ ಮತು್ತ ನಾಗರಿಕ ಸೇವಾ ಅಧಿಕಾರಿಗಳನು್ನ ಜಿಲೆ್ಲಯಿಂದ ಎತ್ತಂಗಡಿ ಮಾಡಲಾಗಿದೆ. ಸಹರಾಪುರ ವಲಯ ಪೊಲೀಸ್ ಕಮಿಷನರ್, ಡಿಐಜಿ ಹಾಗೂ ಮುಜಾಫರ್ನಗರ ಮತು್ತ ಶಾಮಿ್ಲ ಜಿಲೆ್ಲಗಳ ಪೊಲೀಸ್ ವರಿಷಾ್ಠಧಿಕಾರಿಗಳನು್ನ ವಗಾರ್ಯಿಸಲಾಗಿದೆ.
ನ್ಯಾಯಾಂಗ ತನಿಖೆ:
ಈ ಮಧೆ್ಯ, ಗಲಭೆಯ ಕುರಿತು ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ವಿಷು್ಣ ಸಹಾಯ್ ಅವರ ನೇತೃತ್ವದಲಿ್ಲ ಏಕ ಸದಸ್ಯ ನ್ಯಾಯಾಂಗ ಆಯೋಗ ರಚಿಸಲಾಗಿದೆ. ಸರ್ಕಾರಕೆ್ಕ ಇನೆ್ನರಡು ತಿಂಗಳಲಿ್ಲ ಆಯೋಗ ವರದಿ ಸಲಿ್ಲಸಲಿದೆ.
ರಾಜ್ಯದ ಮುಖ್ಯಮಂತಿ್ರ ಅಖಿಲೇಶ್ ಯಾದವ್ ಅವರು ತಮ್ಮ ಸರ್ಕಾರದ ಹೆಸರಿಗೆ ಮಸಿ ಬಳಿಯುವ ಸಂಚಿನಿಂದ ಗಲಭೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. ಗಲಭೆ ನಿಯಂತಿ್ರಸಲು ಎಲ್ಲ ಅಗತ್ಯ ಕಾನೂನು ಕ್ರಮ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ರಾಜ್ಯದ ರಾಜ್ಯಪಾಲ ಬಿ.ಎಲ್. ಜೋಷಿ ಅವರು ಕೇಂದ್ರಕೆ್ಕ ಕಳುಹಿಸಿರುವ ತಮ್ಮ ವರದಿಯಲಿ್ಲ ಹಿಂಸೆ ತಡೆಯಲು ರಾಜ್ಯ ಸರ್ಕಾರ ವಿಫಲವಾಗಿರುವುದಾಗಿ ಆಪಾದಿಸಿರುವುದಾಗಿ ವರದಿಯಾಗಿದೆ.
ಗಲಭೆಯ ಹಿನ್ನೆಲೆ:
ಕೆಲವು ದಿನಗಳ ಹಿಂದೆ, ಮುಜಾಫರ್ನಗರ ಜಿಲೆ್ಲಯ ಕಾವಲ್ ಗ್ರಾಮದಲಿ್ಲ ಕೀಟಲೆ ಪ್ರಕರಣಕೆ್ಕ ಸಂಬಂಧಿಸಿ ಸಮುದಾಯವೊಂದರ ಯುವಕನನು್ನ ಇಬ್ಬರು ಯುವಕರು ಹತೆ್ಯ ಮಾಡಿದ್ದರು. ನಂತರ ಇವರಿಬ್ಬರನು್ನ ಸಮುದಾಯವೊಂದರ ಸದಸ್ಯರು (ಆ.27ರಂದು) ಹತೆ್ಯ ಮಾಡಿದರು. ಆಮೇಲೆ ಇದನು್ನ ಪ್ರತಿಭಟಿಸಲು ಭಾರತೀಯ ಕಿಸಾನ್ ಸಂಘ (ಬಿಕೆಯು) ’ಮಹಾಪಂಚಾಯತ್’ (ಸಭೆ) ನಡೆಸಿದ ಸಂದರ್ಭದಲಿ್ಲ ಸಮುದಾಯವೊಂದರ ಸದಸ್ಯನನು್ನ ಉದಿ್ರಕರ ಗುಂಪು ಹೊಡೆದು ಸಾಯಿಸಿತು. ಈ ಘಟನೆಗಳು ಕೋಮುಗಲಭೆ ಹರಡಲು ಕಾರಣವಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.