ಕಾರ್ಗಿಲ್ ಯುದ್ಧದ ಬಳಿಕ ಸೇನೆಯಲ್ಲಿನ ನ್ಯೂನತೆಯ ಪರಿಸ್ಥಿತಿಯಲ್ಲಿ ಬದಲಾವಣೆಗಳಾಗಿವೆಯೇ? ಎಂಬ ಪ್ರಶ್ನೆಗೆ ಸಿಂಗ್, ‘ಹೌದು, ಪರಿಸ್ಥಿತಿ ಬದಲಾಗಿವೆ. ಕೇವಲ ಭಾರತೀಯ ಸೇನೆಯಲ್ಲಿ ಮಾತ್ರವೇ ಕೊರತೆಗಳಿಲ್ಲ. ಬದಲಾಗಿ ಎಲ್ಲಾ ಸೇನೆಗಳಲ್ಲಿ ನ್ಯೂನತೆಗಳಿವೆ. ಆದರೆ ಪರಿಸ್ಥಿತಿಗಳು ಸುಧಾರಿಸಿವೆ. ಸೇನೆಯ ಅಗತ್ಯಗಳನ್ನು ಪೂರೈಸಲು ಪ್ರಸ್ತುತ ಸರ್ಕಾರ ಸಂಪೂರ್ಣ ಬದ್ಧವಾಗಿದೆ. ನಮ್ಮ ಕೊರತೆಗಳು ನೀಗಿವೆ. ಸವಾಲುಗಳಿಗೆ ಎದೆಯೊಡ್ಡಲು ಸೇನೆಯು ಸರ್ವ ಸನ್ನದ್ಧವಾಗಿದೆ. ಈ ಬಗ್ಗೆ ನಾನು ವೈಯಕ್ತಿಕವಾಗಿ ಆಶ್ವಾಸನೆ ನೀಡುವೆ’ ಎಂದು ಸಿಂಗ್ ಪ್ರತಿಕ್ರಿಯಿಸಿದ್ದಾರೆ.