‘ಕೆಐಎಡಿಬಿ ಅಭಿವೃದ್ಧಿಪಡಿಸುವ ಕೈಗಾರಿಕಾ ಪ್ರದೇಶಗಳಲ್ಲಿ ದಲಿತ ಉದ್ಯಮಗಳಿಗೆ ನಿಯಮದಂತೆ ಶೇ 24.1ರಷ್ಟು ಜಾಗ ಮೀಸಲಿಡಬೇಕು. ಆದರೆ, ವಾಸ್ತವದಲ್ಲಿ ಶೇ 16ರಷ್ಟು ನೀಡಲಾಗುತ್ತಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಜಿಲ್ಲೆಯ 12 ಕೈಗಾರಿಕಾ ಪ್ರದೇಶಗಳಲ್ಲಿ ದಲಿತ ಉದ್ಯಮಿಗಳಿಗೆ 653 ಎಕರೆ ಜಾಗ ಬಿಟ್ಟುಕೊಡುವುದು ಬಾಕಿ ಇದೆ’ ಎಂಬುದನ್ನು ಸಚಿವರ ಗಮನಕ್ಕೆ ಶ್ರೀನಿವಾಸನ್ ತಂದರು.