’ಪರಿಶಿಷ್ಟಜಾತಿ, ಪಂಗಡ, ಹಿಂದುಳಿದವರ ನಿಗಮಗಳಿಗೆ ಅನುದಾನವನ್ನು ಕಡಿತಗೊಳಿಸಲಾಗಿದೆ. ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ನಮ್ಮ ಸರ್ಕಾರ ₹60 ಕೋಟಿ ನೀಡಿತ್ತು, ಈಗಿನ ಸರ್ಕಾರ ₹40 ಕೋಟಿ ಕೊಟ್ಟಿದೆ. ತಾಂಡಾ ಅಭಿವೃದ್ಧಿ ನಿಗಮಕ್ಕೆ ನಮ್ಮ ಸರ್ಕಾರ ₹110 ಕೋಟಿ ನೀಡಿದ್ದರೆ, ಈಗಿನ ಸರ್ಕಾರ ಅದನ್ನು ₹60 ಕೋಟಿಗೆ ಇಳಿಸಿದೆ. ಇದೇ ರೀತಿ ಆದಿಜಾಂಬವ, ಬೋವಿ, ವಿಶ್ವಕರ್ಮ, ಅಂಬಿಗರ ಚೌಡಯ್ಯ, ವೀರಶೈವ–ಲಿಂಗಾಯತ, ಒಕ್ಕಲಿಗರ ಅಭಿವೃದ್ಧಿ ನಿಗಮಗಳಿಗೆ ಭಾರಿ ಪ್ರಮಾಣದಲ್ಲಿ ಅನುದಾನ ಕಡಿತ ಮಾಡಲಾಗಿದೆ. ಈ ರೀತಿ ಕಡಿತ ಮಾಡಿರುವ ಹಣವನ್ನು ಅಲ್ಪಸಂಖ್ಯಾತರಿಗೆ ನೀಡಲಾಗಿದೆ. ಸುಮಾರು ₹3,000 ಕೋಟಿ ನೀಡಲಾಗಿದೆ. ಅವರಿಗೆ ಹಣ ಕೊಡುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ, ಪರಿಶಿಷ್ಟರು ಮತ್ತು ಹಿಂದುಳಿದವರ ಹಣವನ್ನು ಕಡಿತಗೊಳಿಸಿ ನೀಡಿದ್ದು ಸರಿಯಲ್ಲ’ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.