ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ 2019ರ ಮಾರ್ಚ್ ಮೊದಲ ವಾರದಲ್ಲಿ, ‘ಬಿಡಿಎ, ಅರ್ಜಿದಾರರಿಗೆ 31,613 ಚ. ಅಡಿ ಜಮೀನನ್ನು ಅದೇ ಬಡಾವಣೆಯಲ್ಲಿ ಇಲ್ಲವೇ ಅಭಿವೃದ್ಧಿ ಹೊಂದಿದ ಹತ್ತಿರದ ಬಡಾವಣೆಯಲ್ಲಿ ಈ ಅಳತೆಯ ಜಮೀನಿನ ಮಾರುಕಟ್ಟೆ ದರಕ್ಕೆ ಸಮವಾಗಿ ಪರ್ಯಾಯ ರೂಪದಲ್ಲಿ ನೀಡಬೇಕು’ ಎಂದು ಆದೇಶಿಸಿತ್ತು.