’ಹಾಸನದಿಂದ ಭವಾನಿ ರೇವಣ್ಣ ಅಭ್ಯರ್ಥಿ, ಎಂಎಲ್ಸಿ ಟಿಕೆಟ್ ಸೂರಜ್ ರೇವಣ್ಣಗೆ, ಎಂಪಿ ಟಿಕೆಟ್ ಪ್ರಜ್ವಲ್ ರೇವಣ್ಣಗೆ ಕೊಡಬೇಕು. ಅನಿತಾ ಕುಮಾರಸ್ವಾಮಿ ರಾಮನಗರ ಬಿಟ್ಟು ಕೊಡಲು ಮುಂದಾಗಿರುವುದು ನಿಖಿಲ್ ಕುಮಾರಸ್ವಾಮಿಗೆ. ಅದನ್ನೆಲ್ಲಾ ಅವರು ಕರೆಯೋದು ತ್ಯಾಗ ಅಂತ. ಜೆಡಿಎಸ್ ಪಕ್ಷದಲ್ಲಿ ದೊಡ್ಡಗೌಡ್ರು, ಸಣ್ಣಗೌಡ್ರು, ಮರೀಗೌಡ್ರಿಗೆ ಮಾತ್ರ ಚಾನ್ಸ್ ಇರೋದು‘ ಎಂದು ಸಿ.ಟಿ.ರವಿ ಲೇವಡಿ ಮಾಡಿದರು.