ಬೆಂಗಳೂರು:ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಹೋದರ ಸಿದ್ದನಗೌಡ ಪಾಟೀಲ (51) ಸೋಮವಾರ ನಿಧನರಾದರು.
ಬೆಳಿಗ್ಗೆಯಿಂದಸಿದ್ದನಗೌಡ ಅವರು ತೀವ್ರ ಎದೆ ನೋವಿನಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಬಿಎಲ್ಡಿಇ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲೇ ಅವರು ಮೃತಪಟ್ಟರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕಳೆದ ವರ್ಷವಷ್ಟೇ ಬಸನಗೌಡ ಅವರ ಮತ್ತೊಬ್ಬ ಸಹೋದರ ಮೃತಪಟ್ಟಿದ್ದರು.ಮಂಗಳವಾರ ಯತ್ನಾಳ ಅವರ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.