ಸೇವೆ ಕಾಯಂ ಆದ ದಿನದಿಂದ ಅಂದರೆ, 1990 ರಿಂದ 2013ರ ಮಧ್ಯದ ಅವಧಿಯನ್ನು ಮಾತ್ರವೇ ಪರಿಗಣಿಸಿದ್ದ ಸರ್ಕಾರ ₹ 1.92 ಲಕ್ಷ ಗ್ರ್ಯಾಚ್ಯುಟಿ ಪಾವತಿ ಮಾಡಿತ್ತು. ಸೇವೆ ಕಾಯಂಗೊಳ್ಳುವುದಕ್ಕೂ ಮೊದಲಿನ ಅಂದರೆ 1971ರಿಂದ 1999ರ ಮಧ್ಯದಲ್ಲಿ ಮಾಡಿದ ದಿನಗುತ್ತಿಗೆ ಆಧಾರದಡಿಯ ಕೆಲಸಕ್ಕೆ ಗ್ರ್ಯಾಚ್ಯುಟಿ ಪಾವತಿಸಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಬಸವೇಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು.