ರಾಜ್ಯಸಭೆಯಲ್ಲಿ ಕೇರಳದ ಎಂ.ಪಿ.ವೀರೇಂದ್ರಕುಮಾರ್ ಅವರು ಕೇಳಿದ ಪ್ರಶ್ನೆಗೆ ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವ ಡಾ. ಮಹೇಶ್ ಶರ್ಮಾ ಈ ಉತ್ತರ ನೀಡಿದ್ದಾರೆ. ‘ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರದ ನಿರ್ಬಂಧ ತೆರವಿಗೆ ಹಾಗೂ ಕಾಮಗಾರಿ ನಡೆಸಲು ಕರ್ನಾಟಕ ಸರ್ಕಾರ ವಿರೋಧ ವ್ಯಕ್ತಪಡಿಸಿದೆ’ ಎಂದು ಅವರು ತಿಳಿಸಿದ್ದಾರೆ. ಎಲಿವೇಟೆಡ್ ಕಾರಿಡಾರ್ ನಿರ್ಮಾಣದ ಬದಲು ತಿತಿಮತಿ–ಗೋಣಿಕೊಪ್ಪ– ಕುಟ್ಟಾ ಪರ್ಯಾಯ ರಸ್ತೆಯನ್ನು ಅಭಿವೃದ್ಧಿಪಡಿಸುವುದು ಉತ್ತಮ ಎಂಬುದು ಇಲಾಖೆಯ ಅಭಿಮತ’ ಎಂದಿದ್ದಾರೆ.