ಗುಬ್ಬಿ: ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ರಾಜೇನಹಳ್ಳಿಯ ರೈತರೊಬ್ಬರ ತೋಟದ ಬಾವಿಯಲ್ಲಿ ಈಜಲು ಹೋದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ಬೆಂಗಳೂರಿನ ನಂದಿನಿ ಲೇಔಟ್ನ ಅಭಿಷೇಕ್ (18) ಮೃತರು. ಬೆಂಗಳೂರಿನ ಕೆಎಲ್ಇ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಮುಗಿಸಿದ್ದ. ತನ್ನ ಸ್ನೇಹಿತನಾದ ಕೃಷ್ಣನ ಅಣ್ಣನ ಮನೆ ಅವ್ವೇರಹಳ್ಳಿಗೆ ಶುಕ್ರವಾರ ಬಂದು ಉಳಿದುಕೊಂಡಿದ್ದ. ಶನಿವಾರ ರಾಜೇನಹಳ್ಳಿಯ ತಿಮ್ಮೇಗೌಡರ ತೋಟದ ಬಾವಿಯಲ್ಲಿ ಈಜಲು ಹೋಗಿ, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಸಿ.ಎಸ್. ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.