ಸುಪ್ರೀಂಕೋರ್ಟ್ ಆದೇಶಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ರಣ್ದೀಪ್ ಸಿಂಗ್ ಸುರ್ಜೇವಾಲಾ, ‘ಸಂವಿಧಾನ ಗೆದ್ದಿದೆ. ಪ್ರಜಾಪ್ರಭುತ್ವ ಮರುಸ್ಥಾಪನೆಯಾಗಿದೆ. ಮುಖ್ಯಮಂತ್ರಿ ಯಡಿಯುರಪ್ಪನವರಿಗೆ ಒಂದು ದಿನ ಉಳಿದಿದೆ. ರಾಜ್ಯಪಾಲರ ಅಸಂವಿಧಾನಿಕ ನಿರ್ಧಾರ ಹಾಗೂ ನ್ಯಾಯಸಮ್ಮತವಲ್ಲದ ಮುಖ್ಯಮಂತ್ರಿಯನ್ನು ಸಂವಿಧಾನ ತಿರಸ್ಕರಿಸುತ್ತದೆ.' ಎಂದಿದ್ದಾರೆ