ಬಾಗಲಕೋಟೆ: ಸಮೃದ್ಧ ಮಳೆಗಾಗಿ ಪ್ರಾರ್ಥಿಸಿ ಬಾಗಲಕೋಟೆ ತಾಲ್ಲೂಕು ಬೇವೂರಿನಲ್ಲಿ ಸೋಮವಾರ ಗ್ರಾಮಸ್ಥರು ಗೊಂಬೆಗಳ ಮದುವೆ ನೆರವೇರಿಸಿದರು.
ಗ್ರಾಮದ ರೇವಣಸಿದ್ದಪ್ಪ ಕುರಿ ಅವರ ನಿವಾಸ ಮದುವೆ ಮನೆಯಾಗಿ ಬದಲಾಗಿತ್ತು. ವರನಾಗಿದ್ದ ಬೊಂಬೆಗೆ ಬಟ್ಟೆ ತೊಡಿಸಿ, ಟವೆಲ್ ಹಾಕಿ, ತಲೆ ಮೇಲೆ ಟೊಪಿಯನ್ನು ಹಾಕಲಾಗಿತ್ತು. ವಧುವಿನ ಬೊಂಬೆಗೆ ಸೀರೆಯುಡಿಸಿ, ಹಸಿರು ಬಳೆ ತೊಡಿಸಿ ಸಿಂಗರಿಸಲಾಗಿತ್ತು.
ಸಾಂಪ್ರದಾಯಿಕವಾಗಿ ಮದುವೆ ಶಾಸ್ತ್ರಗಳನ್ನು ನೆರವೇರಿಸಲಾಯಿತು. ನೆರೆದಿದ್ದವರು ಮಳೆಗಾಗಿ ಪ್ರಾರ್ಥಿಸಿದರು.
ಮದುವೆ ಕಾರ್ಯಕ್ಕೆ ಬಂದವರಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.