ರಾಯಬಾಗ ತಾಲ್ಲೂಕಿನ ಕುಡಚಿ ಕ್ಷೇತ್ರದ ಬಿಜೆಪಿ ಮಂಡಲ ಅಧ್ಯಕ್ಷ ಬಸವರಾಜ ಸನದಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದು, ‘ಅಧಿಕಾರದ ಆಸೆಗಾಗಿ ಪಕ್ಷ ಸೇರ್ಪಡೆಯಾಗಿರುವವರಿಗೆ (ಪಿ.ರಾಜೀವ್) ಟಿಕೆಟ್ ನೀಡಲಾಗಿದೆ. ಹೊರತು, ಪಕ್ಷಕ್ಕಾಗಿ ಹಲವಾರು ವರ್ಷಗಳಿಂದ ದುಡಿದವರಿಗೆ ಅವಕಾಶ ನೀಡದಿರುವುದು ದುರ್ದೈವ. ಮಾಜಿ ಶಾಸಕ ಬಿ.ಸಿ. ಸರಿಕಾರ ಸೇರಿದಂತೆ ಅಶೋಕ ಗುತ್ತೆ, ಗಣೇಶ ರೋಡಕರ, ವೆಂಕಟೇಶ ವಡ್ಡರ ಆಕಾಂಕ್ಷಿಗಳಾಗಿದ್ದರು. ಇವರ್ಯಾರನ್ನೂ ಪರಿಗಣಿಸದಿರುವುದು ದುರದೃಷ್ಟಕರ. ಜಿಲ್ಲಾ ಅಧ್ಯಕ್ಷ ಶಶಿಕಾಂತ ನಾಯಿಕ ಅವರ ಗಮನಕ್ಕೆ ತಂದಿದ್ದೇನೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ಚರ್ಚಿಸಿ ಮುಂದೆ ಏನು ಮಾಡಬೇಕೆನ್ನುವುದನ್ನು ನಿರ್ಧರಿಸಲಾಗುವುದು’ ಎಂದರು.