ಈ ಕುರಿತು ಪ್ರತಿಕ್ರಿಯಿಸಿದ ಅನಿವಾಸಿ ಭಾರತೀಯರ ಅಧ್ಯಯನಗಳು ಮತ್ತು ಭಾರತೀಯ ಸಂಸ್ಥೆ (ಎಫ್ಐಐಡಿಎಸ್)ಯ ನೀತಿ ಮತ್ತು ಕಾರ್ಯತಂತ್ರ ವಿಭಾಗದ ಮುಖ್ಯಸ್ಥರಾಗಿರುವ ಖಾಂಡೆರಾವ್ ಖಂಡ್, ‘ಯುಎಸ್ಸಿಐಆರ್ಎಫ್ಗೆ ನೂತನ ಸದಸ್ಯರಾಗಿ ನೇಮಕವಾದವರಿಗೆ ಅಭಿನಂದನೆಗಳು. ಆದರೆ, ಈ ಸಂಸ್ಥೆಗೆ ದೊಡ್ಡ ಸಮುದಾಯವೊಂದರ ಪ್ರಾತಿನಿಧ್ಯ ದಕ್ಕಿಸಿಕೊಡಬಹುದಾದ ಐತಿಹಾಸಿಕ ಅವಕಾಶವೊಂದನ್ನು ಮುಖಂಡರು ತಪ್ಪಿಸಿಕೊಂಡಿದ್ದಾರೆ. ಭೂಮಿಯ ಮೇಲಿನ ಪ್ರತಿ ಆರು ಮಂದಿ ಪೈಕಿ ಒಬ್ಬರು ಹಿಂದೂ ಧರ್ಮದವರೇ ಆಗಿರುತ್ತಾರೆ. ಆದರೆ, ಆ ಸಮುದಾಯಕ್ಕೆ ಯುಎಸ್ಸಿಐಆರ್ಎಫ್ನಲ್ಲಿ ಪ್ರಾತಿನಿಧ್ಯವಿಲ್ಲ. ಇದು ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ವರದಿಯಲ್ಲಿ ಸಮತೋಲನ ಮತ್ತು ವೈವಿದ್ಯತೆಯನ್ನು ತರುವಲ್ಲಿ ವಿಫಲವಾಗಲಿದೆ’ ಎಂದು ಅಭಿಪ್ರಾಯಪಟ್ಟರು.